ಜಾಮಿಯಾ ವಿ.ವಿ.ಯಲ್ಲಿ ಗುಂಡು ಹಾರಿಸಿದ ಬಾಲಕ ಗೋಡ್ಸೆಯಂತೆ ರಾಷ್ಟ್ರೀಯವಾದಿ: ಹಿಂದೂ ಮಹಾಸಭಾ
ಹೊಸದಿಲ್ಲಿ, ಜ. 31: ಜಾಮಿಯಾ ವಿ.ವಿ.ಯಲ್ಲಿ ಗುಂಡು ಹಾರಿಸಿದ ಪ್ರಕರಣದ ಆರೋಪಿಯನ್ನು ಗೌರವಿಸಲಾಗುವುದು ಎಂದು ಹಿಂದೂ ಮಹಾಸಭಾ ಶುಕ್ರವಾರ ಘೋಷಿಸಿದೆ.
ಅಲ್ಲದೆ ಹಿಂದೂ ಮಹಾಸಭಾ ಗುಂಡು ಹಾರಿಸಿದ ಬಾಲಕನನ್ನು ‘ನಾಥುರಾಂ ಗೋಡ್ಸೆಯಂತಹ ನಿಜವಾದ ರಾಷ್ಟ್ರೀಯವಾದಿ’ ಎಂದು ಕರೆದಿದೆ.
ವಿದ್ಯಾರ್ಥಿಗಳಿಗೆ ತ್ವರಿತ ಆಝಾದಿ ನೀಡುವ ಮೂಲಕ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್ನ ದೇಶ ವಿರೋಧಿ ಚಟುವಟಿಕೆಯನ್ನು ಮೌನಗೊಳಿಸಿದ ಬಾಲಕನ ಬಗ್ಗೆ ನಮ್ಮ ಸಂಘಟನೆ ಹೆಮ್ಮೆ ಪಡುತ್ತದೆ ಎಂದು ಹಿಂದೂ ಮಹಾಸಭಾದ ವಕ್ತಾರ ಅಶೋಕ್ ಪಾಂಡೆ ಹೇಳಿದ್ದಾರೆ.
ಬಾಲಕ ಪಿಸ್ತೂಲು ಝಳಪಿಸಿರುವುದನ್ನು ಸಮರ್ಥಿಸಿಕೊಂಡಿರುವ ಪಾಂಡೆ, ಬರ್ಬರ ಹತ್ಯೆ ಹಾಗೂ ದೇಶದ ಉತ್ತಮ ಹಿತಾಸಕ್ತಿಗಾಗಿ ಕೆಲವರನ್ನು ಹತ್ಯೆ ನಡೆಸುವುದರ ಕಾನೂನು ಕೂಡ ವ್ಯತ್ಯಾಸ ಕಾಣುತ್ತದೆ ಎಂದರು.
ಶರ್ಜೀಲ್ ಇಮಾಮ್ ಅವರಂತಹ ದೇಶ ವಿರೋಧಿಗಳು ಹಾಗೂ ಅಲಿಗಢ ಮುಸ್ಲಿಂ ವಿ.ವಿ., ಜವಾಹರ್ಲಾಲ್ ನೆಹರೂ ವಿ.ವಿ. ಕ್ಯಾಂಪಸ್ಗಳು, ಶಹೀನ್ಬಾಗ್ ಗುಂಡು ಹಾರಿಸಲು ಅರ್ಹವಾಗಿದೆ ಎಂದು ಪಾಂಡೆ ಹೇಳಿದರು.
ಆರೋಪಿ ಬಾಲಕನಿಗೆ ಹಿಂದೂ ಮಹಾಸಭಾ ಕಾನೂನು ನೆರವು ನೀಡಲಿದೆ ಎಂದು ಅವರು ಘೋಷಿಸಿದರು.