ಶಾಹಿನ್ ಬಾಗ್ ಆತ್ಮಾಹುತಿ ಬಾಂಬರ್ ಗಳನ್ನು ಸೃಷ್ಟಿಸುವ ತಾಣ ಎಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಹೊಸದಿಲ್ಲಿ: ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಶಾಹಿನ್ ಬಾಗ್ ಆತ್ಮಾಹುತಿ ಬಾಂಬರ್ ಗಳನ್ನು ಸೃಷ್ಟಿಸುತ್ತಿರುವ ತಾಣ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿಕೆ ನೀಡಿದ್ದಾರೆ.
"ಶಾಹಿನ್ ಬಾಗ್ ಯಾವುದೇ ಆಂದೋಲನದ ತಾಣವಲ್ಲ. ಇಲ್ಲಿ ಆತ್ಮಾಹುತಿ ಬಾಂಬರ್ ಗಳನ್ನು ಬೆಳಸಲಾಗುತ್ತಿದೆ. ದೇಶದ ರಾಜಧಾನಿಯಲ್ಲೇ ದೇಶದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ" ಎಂದು ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಶಾಹೀನ್ಬಾಗ್ನಲ್ಲಿ ಮಗುವೊಂದು ಸಾವನ್ನಪ್ಪಿತು. ತಾಯಿ ಆ ಮಗು ಹುತಾತ್ಮ ಎಂದು ಹೇಳಿದರು. ಏನಿದು ? ಇದು ಆತ್ಮಾಹುತಿ ಬಾಂಬ್ ಅಲ್ಲದೆ ಮತ್ತೇನು ? ಆದುದರಿಂದ ಇಂತಹ ಆತ್ಮಾಹುತಿ ಬಾಂಬ್ಗಳ ಬಗ್ಗೆ ಜನರು ಎಚ್ಚರ ವಹಿಸಬೇಕಾಗಿದೆ. ಇದೊಂದು ಖಿಲಾಫತ್ ಚಳವಳಿ ಎಂದವರು ಹೇಳಿದ್ದಾರೆ. ಗಿರಿರಾಜ್ ಸಿಂಗ್ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದರು.
Next Story