ಶಬರಿಮಲೆಗೆ ಬರಬೇಡಿ: ಯಾತ್ರಾರ್ಥಿಗಳಿಗೆ ದೇವಸ್ವಂ ಬೋರ್ಡ್ ಮನವಿ
ಫೈಲ್ ಚಿತ್ರ
ತಿರುವನಂತಪುರ,ಮಾ.10: ಕೊರೋನ ವೈರಾಣು ಸೋಂಕು ಹರಡುತ್ತಿರುವುದರಿಂದ ಶಬರಿಮಲೆ ದೇವಾಲಯಕ್ಕೆ ಬರಬೇಡಿ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಯಾತ್ರಾರ್ಥಿಗಳಲ್ಲಿ ಸೋಮವಾರ ಮನವಿ ಮಾಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟಿಡಿಬಿ ಅಧ್ಯಕ್ಷ ಎನ್. ವಾಸು, ತಿಂಗಳ ಪೂಜೆಗಾಗಿ ಬಾಗಿಲು ತೆರೆಯಲಿರುವ ಶಬರಿಮಲೆ ದೇವಾಲಯಕ್ಕೆ ಆಗಮಿಸಬೇಡಿ. ಒಂದು ವೇಳೆ ಈ ಬಗ್ಗೆ ತಿಳಿಯದೆ ಯಾರಾದರೂ ಆಗಮಿಸಿದರೆ, ಅವರನ್ನು ದೇವಾಲಯಕ್ಕೆ ತೆರಳುವುದನ್ನು ತಡೆಯುವುದೇ ಎಂಬ ಬಗ್ಗೆ ನಾವು ನಿರ್ಧರಿಸಿಲ್ಲ ಎಂದಿದ್ದಾರೆ.
Next Story