ಮಹಾರಾಜನಿಗೆ ಸುಸ್ವಾಗತ: ಶಿವರಾಜ್ ಟ್ವೀಟ್
ಹೊಸದಿಲ್ಲಿ, ಮಾ.11: ಜ್ಯೋತಿರಾದಿತ್ಯ ಸಿಂಧಿಯಾ ಅವರ ಬಿಜೆಪಿ ಸೇರ್ಪಡೆಯನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಸ್ವಾಗತಿಸಿದ್ದಾರೆ. ‘ಮಹಾರಾಜನಿಗೆ ಸುಸ್ವಾಗತ’ ಎಂದು ಅವರು ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಯಾರಾದರೂ ಜನಪ್ರಿಯರೆಂಬುದಿದ್ದರೆ ಅದು ಮಹಾರಾಜರಾಗಿದ್ದಾರೆ. ಈಗ ಬಿಜೆಪಿಯಲ್ಲಿ ಮಹಾರಾಜ ಹಾಗೂ ಶಿವರಾಜ ಒಟ್ಟಾಗಿದ್ದಾರೆ ಎಂದು ಶಿವರಾಜ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
“ಬಿಜೆಪಿ ಹಾಗೂ ನನ್ನ ಪಾಲಿಗೆ ಇಂದು ಸಂಭ್ರಮದ ದಿನವಾಗಿದೆ. ಇಂದು ನಾನು ರಾಜಮಾತಾ ವಿಜಯರಾಜೆ ಸಿಂಧಿಯಾ ( ಜ್ಯೋತಿರಾದಿತ್ಯ ಅವರ ಅಜ್ಜಿ)ಅವರನ್ನು ಸ್ಮರಿಸಿಕೊಳ್ಳುತ್ತೇನೆ. ಯಶೋಧರಾಜೀ (ಸಿಂಧಿಯಾ ಅವರ ಚಿಕ್ಕಮ್ಮ) ನಮ್ಮೊಂದಿಗಿದ್ದಾರೆ. ಹೀಗೆ ಇಡೀ ಸಿಂಧಿಯಾ ಕುಟುಂಬ ನಮ್ಮೊಂದಿಗಿದೆ. ರಾಜಕೀಯವು ಜನಸೇವೆಯ ಮಾಧ್ಯಮವೆಂಬ ನಂಬಿರುವ ಪರಂಪರೆ ಈ ಕುಟುಂಬಕ್ಕಿದೆ’’ ಚೌಹಾಣ್ ಹೇಳಿದ್ದಾರೆ.
Next Story