ತಮಿಳುನಾಡಿನಲ್ಲಿ ಎನ್ಪಿಆರ್ ಅನುಷ್ಠಾನಕ್ಕೆ ತಡೆ: ಬಿಜೆಪಿ ಮಿತ್ರಪಕ್ಷ ಎಐಎಡಿಎಂಕೆ
ಹೊಸದಿಲ್ಲಿ, ಮಾ. 12: ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್ಪಿಆರ್) ಅನುಷ್ಠಾನಕ್ಕೆ ಬಿಜೆಪಿಯ ಮೊತ್ತೊಂದು ಮಿತ್ರಪಕ್ಷವಾದ ತಮಿಳುನಾಡಿನ ಎಐಎಡಿಎಂಕೆ ತಡೆ ಒಡ್ಡಿದೆ.
ಎನ್ಪಿಆರ್ ಕುರಿತು ರಾಜ್ಯದ ಪ್ರಶ್ನೆಗಗಳಿಗೆ ಕೇಂದ್ರ ಸರಕಾರ ಉತ್ತರಿಸಿಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ. ಇ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರಕಾರ ಹೊಸತಾಗಿ ಸೇರಿಸಲಾದ 6 ಪ್ರಶ್ನೆಗಳನ್ನು ತೆಗೆಯುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
‘‘ಎನ್ಪಿಆರ್ನಲ್ಲಿ 6 ಹೊಸ ಪ್ರಶ್ನೆಗಳಿವೆ. ಅದು ಮುಸ್ಲಿಮರಲ್ಲಿ ಭಯವನ್ನು ಮೂಡಿಸಿದೆ’’ ಎಂದು ಕಂದಾಯ ಸಚಿವ ಆರ್.ಬಿ. ಉದಯ್ ಕುಮಾರ್ ಹೇಳಿದ್ದಾರೆ. ‘‘ಸ್ಪಷ್ಟನೆ ಕೋರಿ ತಮಿಳುನಾಡು ಸರಕಾರ ಸಲ್ಲಿಸಿದ ಮನವಿಗೆ ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಸರಕಾರ ಇದುವರೆಗೆ ಪ್ರತಿಕ್ರಿಯೆ ನೀಡದೇ ಇರುವುದರಿಂದ ನಾವು ಎನ್ಪಿಆರ್ ಅನ್ನು ಅನುಷ್ಠಾನಕ್ಕೆ ತರುವುದಿಲ್ಲ’’ ಎಂದು ಅವರು ಹೇಳಿದ್ದಾರೆ.
Next Story