ಬಾಬರಿ ಮಸೀದಿ ದ್ವಂಸಕ್ಕೆ ನೀವು ನೀಡಿದ ಕೊಡುಗೆಯ ಬಗ್ಗೆ ಹೆಮ್ಮೆ ಪಡಿ: ಪ್ರಿಯಾಂಕಾಗೆ ಉವೈಸಿ ಚಾಟಿ
ಹೊಸದಿಲ್ಲಿ: ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾಡಿರುವ ಟ್ವೀಟ್ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಬಾಬರಿ ಮಸೀದಿ ದ್ವಂಸಗೊಳಿಸಿದ ಆಂದೋಲನಕ್ಕೆ ಕಾಂಗ್ರೆಸ್ ಕೊಡುಗೆ ನೀಡಿದೆ ಎಂದು ಆರೋಪಿಸಿದರು.
“ಅವರು ಇನ್ನು ಮುಂದೆ ನಟನೆ ಮಾಡುತ್ತಿಲ್ಲ ಎಂದು ತಿಳಿದು ಸಂತೋಷವಾಗಿದೆ. ಹಿಂದುತ್ವದ ಉಗ್ರಗಾಮಿ ಸಿದ್ಧಾಂತವನ್ನು ಅವರು ಒಪ್ಪಿಕೊಳ್ಳುತ್ತಾರೆಂದಾದರೆ ಪರವಾಗಿಲ್ಲ. ಆದರೆ ಸಹೋದರತೆಯ ಬಗ್ಗೆ ಇಷ್ಟೆಲ್ಲಾ ಪೊಳ್ಳು ಮಾತುಗಳೇಕೆ?. ನೀವು ನಾಚಿಕೆಪಟ್ಟುಕೊಳ್ಳಬೇಡಿ. ನಮ್ಮ ಬಾಬರಿ ಮಸೀದಿಯನ್ನು ದ್ವಂಸಗೊಳಿಸಿದ ಘಟನೆಗೆ ನಿಮ್ಮ ಕೊಡುಗೆಯ ಬಗ್ಗೆ ಹೆಮ್ಮೆಪಡಿ” ಎಂದು ಉವೈಸಿ ಟ್ವೀಟ್ ಮಾಡಿದ್ದಾರೆ.
Glad that they are not pretending anymore. It's okay if they want to embrace this extremist ideology of Hindutva but why all this hollow talk about brotherhood?
— Asaduddin Owaisi (@asadowaisi) August 4, 2020
Don't be shy, please be proud of your party's contributions to the movement that demolished our Babri Masjid https://t.co/wT2H9GJ7MD