ಬಾಲಕನ ಅತ್ಯಾಚಾರಕ್ಕೆ ಯತ್ನಿಸಿ, ಗುಪ್ತಾಂಗವನ್ನು ಕತ್ತರಿಸಲು ಮುಂದಾದ ಸಾಧುವಿನ ಬಂಧನ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಆಶ್ರಮದಲ್ಲಿ ಅಪ್ರಾಪ್ತ ಬಾಲಕನೊಬ್ಬನ ಮೇಲೆ ಸಾಧುವೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ ಎಂದು timesnownews.com ವರದಿ ಮಾಡಿದೆ. ಸಾಧುವಿನ ಯತ್ನವನ್ನು ಬಾಲಕ ವಿರೋಧಿಸಿದ್ದನೆಂಬ ಕಾರಣಕ್ಕೆ ಆರೋಪಿ ಬಾಲಕನ ಜನನಾಂಗವನ್ನು ಕತ್ತರಿಸಲು ಯತ್ನಿಸಿದ್ದಾನೆಂದು ಆರೋಪಿಸಲಾಗಿದೆ.
ಸಂತ್ರಸ್ತ 14 ವರ್ಷದ ಬಾಲಕ ಘಟನೆಯಲ್ಲಿ ಗಾಯಗೊಂಡಿದ್ದರೂ ಸಾಧುವಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ,. ಆರೋಪಿಯನ್ನು ರಾಮಸೇವಕ್ ದಾಸ್ ಎಂದು ಗುರುತಿಸಲಾಗಿದೆ.
ಆಶ್ರಮವೊಂದರಲ್ಲಿ ಸಂಸ್ಕೃತ ವಿದ್ಯಾರ್ಥಿಯಾಗಿರುವ ಬಾಲಕ ತನಗಾದ ಭಯಾನಕ ಅನುಭವವನ್ನು ತನ್ನ ಸ್ಥಳೀಯ ಪೋಷಕರಲ್ಲಿ ಹೇಳಿಕೊಂಡ ನಂತರ ಪೊಲೀಸ್ ದೂರು ನೀಡಲಾಗಿದ್ದು ಸಾಧುವನ್ನು ಬಂಧಿಸಲಾಗಿದೆ.
ಸರಯೂ ನದಿಯಿಂದ ನೀರು ತರಲು ಹೋಗಿದ್ದ ಬಾಲಕನನ್ನು ಕಂಡು ಆತನಿಗೆ ಆಮಿಷವೊಡ್ಡಿ ಆಶ್ರಮಕ್ಕೆ ಕರೆಸಿಕೊಂಡ ಸಾಧು ನಂತರ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದನೆನ್ನಲಾಗಿದೆ ಎಂದು timesnownews.com ವರದಿ ತಿಳಿಸಿದೆ.
Next Story