ಕ್ಷಮೆಯಾಚಿಸಿದರೆ ಸಂಸದರ ಅಮಾನತು ಹಿಂಪಡೆಯಲಾಗುವುದು: ರವಿಶಂಕರ್ ಪ್ರಸಾದ್
ಹೊಸದಿಲ್ಲಿ, ಸೆ.22: ಅಮಾನತುಗೊಂಡಿರುವ 8 ರಾಜ್ಯಸಭಾ ಸದಸ್ಯರು ರಾಜ್ಯಸಭೆಯಲ್ಲಿ ತೋರಿರುವ ತಮ್ಮ ವರ್ತನೆಗೆ ಕ್ಷಮೆ ಕೋರಿದರೆ ಮಾತ್ರ ಅವರ ವಿರುದ್ಧದ ಅಮಾನತನ್ನು ಹಿಂಪಡೆಯಲು ಸರಕಾರ ಪರಿಗಣಿಸಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
8 ಸದಸ್ಯರ ವಿರುದ್ಧ ಅಮಾನತನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸಭಾ ತ್ಯಾಗ ಮಾಡಿದ ಬಳಿಕ ಪ್ರಸಾದ್ ಈ ಹೇಳಿಕೆ ನೀಡಿದರು.
ಅಮಾನತುಗೊಂಡಿರುವ ಸದಸ್ಯರುಗಳು ರಾಜ್ಯಸಭೆಯಲ್ಲಿ ತಾವು ತೋರಿದ್ದ ವರ್ತನೆಯ ಕುರಿತು ಕ್ಷಮೆಯಾಚಿಸಿದರೆ ನಾವು ಅಮಾನತು ಶಿಕ್ಷೆಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಪ್ರಸಾದ್ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
Next Story