ರೈತರೊಂದಿಗೆ ನಿಂತ ಅಕಾಲಿದಳಕ್ಕೆ ಶರದ್ ಪವಾರ್ ಧನ್ಯವಾದ
ಮುಂಬೈ, ಸೆ. 27: ಆಡಳಿತೂಢ ಬಿಜೆಪಿಯ ಹಳೆಯ ಮೈತ್ರಿಪಕ್ಷ ಶಿರೋಮಣಿ ಅಕಾಲಿ ದಳ ಎನ್ ಡಿಎಯಿಂದ ಹೊರಬಂದಿರುವುದಕ್ಕೆ ಎನ್ ಸಿಪಿ ವರಿಷ್ಠ ಶರದ್ ಪವಾರ್ ಶ್ಲಾಘಿಸಿದರು.
ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ನಿಂತಿರುವ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಹಾಗೂ ಕಳೆದ ವಾರ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹರ್ಸಿಮ್ರತ್ ಕೌರ್ ಬಾದಲ್ ಗೆ ಧನ್ಯವಾದ ಸಲ್ಲಿಸುವೆ ಎಂದು ಹಿರಿಯ ರಾಜಕಾರಣಿ ಪವಾರ್ ಹೇಳಿದರು.
"ರೈತರು ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗೌರವಾನ್ವಿತ ಪ್ರಕಾಶ್ ಸಿಂಗ್ ಬಾದಲ್ ನಾಯಕತ್ವದಲ್ಲಿ ಎನ್ ಡಿಎ ಮೈತ್ರಿಕೂಟದಿಂದ ಹೊರ ಬಂದಿರುವ ಅಕಾಲಿದಳದ ಸುಖ್ಬೀರ್ ಸಿಂಗ್ ಬಾದಲ್, ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಗೆ ಧನ್ಯವಾದಗಳು. ರೈತರೊಂದಿಗೆ ದೃಢವಾಗಿ ನಿಂತಿರುವುದಕ್ಕೆ ನಿಮಗೆ ಕೃತಜ್ಞತೆಗಳು'' ಎಂದು ಪವಾರ್ ಟ್ವೀಟಿಸಿದ್ದಾರೆ.
Next Story