ನನ್ನ ಹೃದಯ ಬಗೆದರೆ ಅದರಲ್ಲಿ ಮೋದಿ ಇದ್ದಾರೆ: ಚಿರಾಗ್ ಪಾಸ್ವಾನ್
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಪಕ್ಷವು ಚಿರಾಗ್ ಪಾಸ್ವಾನ್ ರನ್ನು ಟೀಕಿಸಿದ್ದು, ಈ ಬಗ್ಗೆ ಮಾತನಾಡಿರುವ ಅವರು ಬಿಜೆಪಿ ನಾಯಕರ ಹೇಳಿಕೆಯಿಂದ ತನಗೆ ನೋವಾಗಿದೆ ಎಂದಿದ್ದಾರೆ. ಆದರೆ ಚುನಾವಣೆಯ ನಂತರ ಬಿಜೆಪಿ ಜೊತೆ ಸೇರಿ ಸರಕಾರ ಸ್ಥಾಪಿಸುವ ತನ್ನ ಗುರಿ ಇನ್ನೂ ಹಾಗೆಯೇ ಉಳಿದಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ರಾಮನಂತಿದ್ದರೆ ತಾನು ಅವರ ಹನುಮಂತ ಎಂದು ಎಲ್ ಜೆಪಿ ನಾಯಕ ಇದೇ ಸಂದರ್ಭ ಹೇಳಿದ್ದಾರೆ.
“ನನಗೆ ಪ್ರಧಾನಿಯವರ ಫೋಟೊ ಬೇಕಿಲ್ಲ. ರಾಮನಿಗಾಗಿ ಹನುಮಂತನ ಭಕ್ತಿಯ ಹಾಗೆ ಅವರು ನನ್ನ ಹೃದಯದಲ್ಲಿದ್ದಾರೆ. ನೀವು ನನ್ನ ಹೃದಯ ಬಗೆದರೆ ಅಲ್ಲಿ ಮೋದಿಜಿ ಇದ್ದಾರೆ” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
Next Story