ದುರ್ಗಾ ಪೂಜಾ ಪೆಂಡಾಲ್ ಗೆ ಪ್ರವೇಶ ನಿರ್ಬಂಧ ಭಾಗಶಃ ಸಡಿಲಿಸಿದ ಕಲ್ಕತ್ತಾ ಹೈಕೋರ್ಟ್
ಕೋಲ್ಕತಾ: ಕೊರೋನ ವೈರಸ್ ಹಿನ್ನೆಲೆಯಲ್ಲಿ ಭಕ್ತರಿಗೆ ದುರ್ಗಾ ಪೂಜಾ ಪೆಂಡಾಲ್ ಒಳಗೆ ಪ್ರವೇಶವನ್ನುಸಂಪೂರ್ಣ ನಿರ್ಬಂಧಿಸಿ ಆದೇಶಿಸಿದ್ದ ಕಲ್ಕತ್ತಾ ಹೈಕೋರ್ಟ್ ಪಶ್ಚಿಮಬಂಗಾಳದಲ್ಲಿ ಅತ್ಯಂತ ದೊಡ್ಡ ಹಬ್ಬ ಆರಂಭವಾಗುವ ಮುನ್ನಾದಿನ ತನ್ನ ನಿರ್ಬಂಧದಲ್ಲಿ ಭಾಗಶಃ ಸಡಿಲಿಕೆಯನ್ನು ಮಾಡಿದೆ.
ನಗರದ ಪ್ರಮುಖ 400 ದುರ್ಗಾ ಪೂಜಾ ಆಯೋಜಕರು ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಒಂದು ಬಾರಿಗೆ 45 ಜನರಿಗೆ ಪೂಜಾ ಪೆಂಡಾಲ್ ನೊಳಗೆ ಪ್ರವೇಶಿಸಲು ನ್ಯಾಯಾಲಯ ಅವಕಾಶ ನೀಡಿದೆ.
ದುರ್ಗಾ ಪೂಜಾ ಆಯೋಜಕರ ಸಂಘಟನೆ ದುರ್ಗೋತ್ಸವ ವೇದಿಕೆಯು ಮಂಗಳವಾರ ನ್ಯಾಯಾಲಯದ ಮೆಟ್ಟಿಲು ಏರಿತ್ತು.
Next Story