ಹೊಸದಿಲ್ಲಿ: ಅರುಣಾಚಲ ಪ್ರದೇಶದ ತಿರಪ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ಗಸ್ತು ತಂಡದ ಮೇಲೆ ಶಂಕಿತ ಉಗ್ರಗಾಮಿಗಳು ನಡೆಸಿರುವ ಹೊಂಚು ದಾಳಿಯಲ್ಲಿ ಓರ್ವ ಯೋಧ ಬಲಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮ್ಯಾನ್ಮಾರ್ ಗಡಿ ಸಮೀಪ ಈ ಘಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ ಭಾರೀ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.