ಇದು ತನಿಖಾ ಪತ್ರಿಕೋದ್ಯಮವೇ?: ಸುಶಾಂತ್ ಪ್ರಕರಣದ ಕುರಿತು ರಿಪಬ್ಲಿಕ್ ಟಿ.ವಿ.ಯನ್ನು ಪ್ರಶ್ನಿಸಿದ ಬಾಂಬೆ ಹೈಕೋರ್ಟ್
ಲಕ್ನೋ, ಅ. 21: ಪ್ರಕರಣವೊಂದರಲ್ಲಿ ಯಾರನ್ನು ಬಂಧಿಸಬೇಕು ಎಂದು ಸಾರ್ವಜನಿಕರನ್ನು ಕೇಳುವುದು ತನಿಖಾ ಪತ್ರಿಕೋದ್ಯಮದ ಭಾಗವೇ ? ಎಂದು ಬಾಂಬೆ ಉಚ್ಚ ನ್ಯಾಯಾಲಯ ರಿಪಬ್ಲಿಕ್ ಟಿ.ವಿ. ಪರ ವಕೀಲರನ್ನು ಬುಧವಾರ ಕಟುವಾಗಿ ಪ್ರಶ್ನಿಸಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಹಿನ್ನೆಲೆಯಲ್ಲಿ ರಿಪಬ್ಲಿಕ್ ಟಿ.ವಿ. ಟ್ವಿಟ್ಟರ್ನಲ್ಲಿ ‘ರಿಯಾರನ್ನು ಬಂಧಿಸಿ’ ಎಂದು ಹ್ಯಾಷ್ಟ್ಯಾಗ್ ಅಭಿಯಾನ ನಡೆಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಹಾಗೂ ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರನ್ನೊಳಗೊಂಡ ನ್ಯಾಯ ಪೀಠ ರಿಪಬ್ಲಿಕ್ ಟಿ.ವಿ. ಪರ ವಕೀಲ ಮಾಳವಿಕ ತ್ರಿವೇದಿ ಅವರಲ್ಲಿ ಈ ಪ್ರಶ್ನೆ ಕೇಳಿತು. ಪ್ರಕರಣ ವಿಚಾರಣೆಯಲ್ಲಿ ಇರುವಾಗ ಹಾಗೂ ಪ್ರಕರಣ ಕೊಲೆಯೋ, ಆತ್ಮಹತ್ಯೆಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವಾಗ ಚಾನೆಲ್ ಕೊಲೆ ಎಂದು ಹೇಳುತ್ತಿದೆ. ಇದು ತನಿಖಾ ಪತ್ರಿಕೋದ್ಯಮವೇ ? ಎಂದು ಪೀಠ ಪ್ರಶ್ನಿಸಿತು.
Next Story