ಬಿಹಾರ ಚುನಾವಣೆ: ಅಭ್ಯರ್ಥಿಯ ಗುಂಡಿಕ್ಕಿ ಹತ್ಯೆ
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ರಾಷ್ಟ್ರೀಯವಾದಿ ಪಕ್ಷದ ಅಭ್ಯರ್ಥಿ ಶ್ರೀ ನಾರಾಯಣ ಸಿಂಗ್ ರನ್ನು ಶೆಯೊಹರ್ ಜಿಲ್ಲೆಯ ಹಥ್ಸರ್ ಗ್ರಾಮದಲ್ಲಿ ಶನಿವಾರ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ಪೂರ್ನಿಯಾ ಎಸ್ಎಚ್ಒ ಮುನ್ನಾ ಕುಮಾರ್ ಹೇಳಿದ್ದಾರೆ.
ಕೃತ್ಯನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಓರ್ವ ಶೂಟರ್ ನ್ನು ಅಭ್ಯರ್ಥಿಯ ಬೆಂಬಲಿಗರು ತಕ್ಷಣವೇ ಹಿಡಿದು ಮನಬಂದಂತೆ ಥಳಿಸಿದ್ದಾರೆ. ಶೂಟರ್ ನ ಗುರುತನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ.ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದರೂ ಬದುಕುಳಿಯಲಿಲ್ಲ ಎಂದು ಎಸ್ಪಿ ಸಂತೋಷ್ ಕುಮಾರ್ ಹೇಳಿದ್ದಾರೆ.
ಬಿಹಾರ ಅಸೆಂಬ್ಲಿ ಚುನಾವಣೆಯು ಅ.28ರಿಂದ ಮೂರುಹಂತದಲ್ಲಿ ನಡೆಯಲಿದೆ.
Next Story