ಸಿಆರ್ಪಿಎಫ್ ಯೋಧನ ಆತ್ಮಹತ್ಯೆ
ಸುಕ್ಮಾ(ಛತ್ತೀಸ್ಗಡ),ಅ.31: ಸಿಆರ್ಪಿಎಫ್ ಯೋಧನೋರ್ವ ತನ್ನ ಸರ್ವಿಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಕ್ಮಾ ಜಿಲ್ಲೆಯ ದೋರನಾಪಾಲ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸಿಆರ್ಪಿಎಫ್ನ 223ನೇ ಬಟಾಲಿಯನ್ಗೆ ಸೇರಿದ ಕಾನ್ಸ್ಟೇಬಲ್ ಕಮಲಾಕಾಂತ ರೋಹಿದಾಸ (27) ದೋರನಾಪಾಲ್ನಲ್ಲಿರುವ ತನ್ನ ಯೂನಿಟ್ನ ಮುಖ್ಯಕಚೇರಿಯಲ್ಲಿ ಇನ್ಸಾಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡಿದ್ದ. ಗುಂಡಿನ ಸದ್ದು ಕೇಳಿ ಸಹೋದ್ಯೋಗಿಗಳು ಧಾವಿಸಿ ಬಂದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.
ರೋಹಿದಾಸ ಒಡಿಶಾದ ಝಾರಸುಗುಡಾ ಜಿಲ್ಲೆಯ ನಿವಾಸಿಯಾಗಿದ್ದ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲವಾದರೂ ಆತ ಪ್ರೇಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಆತಂಕದಲ್ಲಿದ್ದ ಎನ್ನುವುದನ್ನು ಆತನ ವಾಟ್ಸ್ಆ್ಯಪ್ ಸಂದೇಶಗಳು ಬೆಟ್ಟು ಮಾಡುತ್ತಿವೆ ಎಂದು ಪೊಲೀಸರು ತಿಳಿಸಿದರು.
Next Story