ಕಸ್ಟಮ್ಸ್ ಇಲಾಖೆಯಲ್ಲಿ ವಿಚಾರಣೆಗೆ ಹಾಜರಾದ ಕೇರಳ ಸಚಿವ ಕೆಟಿ ಜಲೀಲ್
ತಿರುವನಂತಪುರ, ನ.9: ತಿರುವನಂತಪುರನ ಯುಎಇ ಕಾನ್ಸುಲೇಟ್ ಅಧಿಕಾರಿಗಳು ಆಮದು ಮಾಡಿಕೊಂಡ ಪವಿತ್ರ ಕುರಾನ್ನ ಸಾಗಣೆಯ ಸಂದರ್ಭ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕೇರಳದ ಉನ್ನತ ಶಿಕ್ಷಣ ಸಚಿವ ಕೆಟಿ ಜಲೀಲ್ ಸೋಮವಾರ ಕಸ್ಟಮ್ಸ್ ಅಧಿಕಾರಿಗಳೆದುರು ವಿಚಾರಣೆಗೆ ಹಾಜರಾದರು ಎಂದು ವರದಿಯಾಗಿದೆ.
ಸಚಿವರು ಸೋಮವಾರ ಮಧ್ಯಾಹ್ನ ಕೊಚ್ಚಿಯಲ್ಲಿರುವ ಕಸ್ಟಮ್ಸ್ ಆಯುಕ್ತಾಲಯದಲ್ಲಿ ನಡೆದ ವಿಚಾರಣೆಗೆ ಹಾಜರಾದ ವೀಡಿಯೊ ಟಿವಿ ವಾಹಿನಿಯಲ್ಲಿ ಪ್ರಸಾರವಾಗಿದೆ. ಯುಎಇ ಕಾನ್ಸುಲೇಟ್ ಅಧಿಕಾರಿಗಳು ತಮ್ಮ ವೈಯಕ್ತಿಕ ಬಳಕೆಯ ಉದ್ದೇಶಕ್ಕಾಗಿ ಕುರಾನ್ ಪ್ರತಿಗಳನ್ನು ರಾಜತಾಂತ್ರಿಕ ಪ್ರಕ್ರಿಯೆಯ ಮೂಲಕ ಆಮದು ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ಕಸ್ಟಮ್ಸ್ ಅಧಿಕಾರಿಗಳು ಸಚಿವ ಜಲೀಲ್ರಿಗೆ ಸಮನ್ಸ್ ನೀಡಿದ್ದರು. ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲೂ ಈ ಹಿಂದೆ ಎನ್ಐಎ ಅಧಿಕಾರಿಗಳು ಸಚಿವ ಜಲೀಲ್ರನ್ನು ಪ್ರಶ್ನಿಸಿದ್ದರು.
Next Story