ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಒ ಚಂದಾ ಕೊಚ್ಚಾರ್ ಮೇಲ್ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಐಸಿಐಸಿಐ ಬ್ಯಾಂಕ್ ನ ಸಿಇಒ ಹಾಗೂ ಎಂಡಿ ಹುದ್ದೆಯಿಂದ ತನ್ನನ್ನು ಉಚ್ಚಾಟಿಸಿರುವ ಕ್ರಮದ ವಿರುದ್ಧ ಚಂದಾ ಕೊಚ್ಚಾರ್ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಬಾಂಬೆ ಹೈಕೋರ್ಟ್ ತನ್ನ ಅರ್ಜಿಯನ್ನು ತಿರಸ್ಕರಿಸಿದ ಕಾರಣಕ್ಕೆ ಚಂದಾ ಕೊಚ್ಚಾರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಕಳೆದ ವರ್ಷ ಕೊಚ್ಚಾರ್ ರನ್ನು ಐಸಿಐಸಿಐ ಸಿಇಒ ಹಾಗೂ ಎಂಡಿ ಹುದ್ದೆಯಿಂದ ಉಚ್ಚಾಟಿಸಲಾಗಿತ್ತು. ಉನ್ನತ ಹುದ್ದೆಗೇರಿದ ಬಳಿಕ 2003ರ ಬಳಿಕ ಚಂದಾ ಕೊಚ್ಚಾರ್ ಗೆ ನೀಡಿರುವ ಬೋನಸ್ ಗಳನ್ನು ಹಿಂಪಡೆಯಲು ಬೋರ್ಡ್ ನಿರ್ಧರಿಸಿತ್ತು.
"ಕ್ಷಮಿಸಿ, ಹೈಕೋರ್ಟಿನ ಆದೇಶಕ್ಕೆ ಮಧ್ಯಪ್ರವೇಶಿಸಲು ನಾವು ಬಯಸುವುದಿಲ್ಲ''ಎಂದು ಜಸ್ಟಿಸ್ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ತೀರ್ಪಿನಲ್ಲಿ ತಿಳಿಸಿದೆ.
Next Story