ಭಾರತದ ಆಂತರಿಕ ವಿಚಾರಗಳ ಕುರಿತು ಬೇರೆ ದೇಶದ ನಾಯಕರು ಮಾತನಾಡಬಾರದು
ಕೆನಡಾ ಪ್ರಧಾನಿ ಹೇಳಿಕೆಗೆ ರಾಜನಾಥ್ ಸಿಂಗ್ ಪ್ರತಿಕ್ರಿಯೆ
ಹೊಸದಿಲ್ಲಿ : ಭಾರತದಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಕುರಿತಂತೆ ಕಳೆದ ತಿಂಗಳು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ನೀಡಿದ್ದ ಪ್ರತಿಕ್ರಿಯೆಗೆ ಇಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ಆಂತರಿಕ ವ್ಯವಹಾರಗಳ ಕುರಿತಂತೆ ಯಾವುದೇ ದೇಶದ ನಾಯಕ ಕೂಡ ಮಾತನಾಡಬಾರದು ಎಂದು ಹೇಳಿದ್ದಾರೆ.
"ಭಾರತಕ್ಕೆ ಯಾವುದೇ ಬಾಹ್ಯ ಹಸ್ತಕ್ಷೇಪದ ಅಗತ್ಯವಿಲ್ಲ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ. ಇದು ನಮ್ಮ ಆಂತರಿಕ ವಿಚಾರ. ನಮ್ಮ ಆಂತರಿಕ ವ್ಯವಹಾರಗಳ ಕುರಿತಂತೆ ಹೇಳಿಕೆ ನೀಡುವ ಹಕ್ಕು ಜಗತ್ತಿನ ಯಾವುದೇ ದೇಶಕ್ಕಿಲ್ಲ. ಯಾರೋ ಏನನ್ನೋ ಹೇಳಲು ಭಾರತ ಸುಮ್ಮನೆ ಒಂದು ಸಾಮಾನ್ಯ ದೇಶವಲ್ಲ'' ಎಂದೂ ಅವರು ಹೇಳಿದರು.
"ನಮ್ಮ ರೈತ ಸಹೋದರರನ್ನು ದಾರಿ ತಪ್ಪಿಸುವ ಯತ್ನಗಳು ನಡೆಯುತ್ತಿವೆ'' ಎಂದು ಕೂಡ ಸಚಿವರು ಆರೋಪಿಸಿದರು.
Next Story