ಲೈವ್ ನಲ್ಲೇ ತನ್ನ ಹೇಳಿಕೆ ತಿರುಚಲೆತ್ನಿಸಿದ ವಾರ್ತಾ ನಿರೂಪಕನನ್ನು ‘ಕೀಳುಮಟ್ಟದ ಪತ್ರಕರ್ತ’ ಎಂದ ಕಾಂಗ್ರೆಸ್ ವಕ್ತಾರೆ

ಹೊಸದಿಲ್ಲಿ,ಜ.14: ಮುಕೇಶ್ ಅಂಬಾನಿ ಒಡೆತನದ ನ್ಯೂಸ್ 18 ಇಂಡಿಯಾ ವಾಹಿನಿಯ ಸಂಪಾದಕ ಮತ್ತು ಮುಖ್ಯ ನಿರೂಪಕ ಅಮೀಷ್ ದೇವಗನ್ ನನ್ನು ಎಕ್ಸ್ ಪೋಸ್ ಮಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಠೆ ಅವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ವಿದ್ಯಮಾನ ನಡೆದ ನಿರ್ದಿಷ್ಟ ಟಿವಿ ಶೋ ವೀಡಿಯೋ ಕೂಡ ವೈರಲ್ ಆಗಿದೆ.
ಕಾರ್ಯಕ್ರಮದ ವೇಳೆ ಸುಪ್ರಿಯಾ ಅವರು ಮಾತನಾಡುತ್ತಾ "ಜನವರಿ 26 ನಮ್ಮ ಗಣತಂತ್ರ ದಿನ. ನಮ್ಮ ಸಂವಿಧಾನ ಪರಮೋಚ್ಛವಾಗಿದೆ. ಈ ಸಂವಿಧಾನವನ್ನು ಚೂರು ಚೂರು ಮಾಡಲು ಕಂಕಣ ತೊಟ್ಟವರು ಒಂದು ಕ್ಷಣ ಸುಮ್ಮನಾಗಿ ಆ ದಿನ ಆತ್ಮಾವಲೋಕನ ನಡೆಸಬೇಕಿದೆ" ಎಂದು ಹೇಳಿದ್ದರು.
ಆದರೆ ಆಕೆ ಅಷ್ಟು ಹೇಳಿದ್ದೇ ತಡ, ಆಕೆ ಅಮೆರಿಕಾದ ಕ್ಯಾಪಿಟೊಲ್ ಹಿಲ್ ರೀತಿಯ ಮುತ್ತಿಗೆಯನ್ನು ರೈತರು ಭಾರತದಲ್ಲಿ ನಡೆಸಬೇಕೆಂದು ಕರೆ ನೀಡಿದ್ದಾರೆಂದು ವಾಹಿನಿಯ ಆ್ಯಂಕರ್ ಅಮೀಷ್ ದೇವಗನ್ ತೀರ್ಮಾನಿಸಿಯೇ ಬಿಟ್ಟಿದ್ದರು. "ಹಾಗಾದರೆ ನಿಮಗೆ ಕ್ಯಾಪಿಟೊಲ್ ಹಿಲ್ ಘಟನೆ ಪುನರಾವರ್ತನೆಯಾಗಬೇಕು. ಕಾಂಗ್ರೆಸ್ ವಕ್ತಾರೆ ಇದನ್ನು ಅಧಿಕೃತವಾಗಿ ಹೇಳುತ್ತಿದ್ದಾರೆ" ಎಂದು ದೇವಗನ್ ಹೇಳಿದರು.
ಕಾರ್ಯಕ್ರಮದ ಆ್ಯಂಕರ್ ತಮ್ಮ ಹೇಳಿಕೆಯನ್ನು ಈ ರೀತಿ ತಿರುಚಿದ್ದನ್ನು ಕಂಡು ಆಘಾತಗೊಂಡ ಸುಪ್ರಿಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ "ಖಂಡಿತವಾಗಿಯೂ ಇಲ್ಲ, ನೀವು ಬಹಳ ಕೆಳ ಮಟ್ಟಕ್ಕೆ ಇಳಿಯುತ್ತಿದ್ದೀರ" ಎಂದು ಹೇಳುತ್ತಲೇ ಇದ್ದರೂ ಇದು ಅಮೀಷ್ ದೇವಗನ್ ಅವರ ಕಿವಿಗೆ ಬಿದ್ದಂತೆ ಕಂಡಿಲ್ಲ. "ನೀವು ಈಗಷ್ಟೇ ಹೇಳಿದ್ದೀರಿ, ನಿಮಗೆ ಇದೇ ಬೇಕೆಂದು ಈಗ ಹೇಳಿದ್ದೀರಿ" ಎಂದು ಅವರು ಹೇಳಲಾರಂಭಿಸಿದರು.
ಕೊನೆಗೆ ತಾಳ್ಮೆ ಕಳೆದುಕೊಂಡ ಸುಪ್ರಿಯಾ "ತುಮ್ ಗಿರೇ ಹುವೇ ಪತ್ರಕಾರ್ ಹೋ ( ನೀವು ಕೀಳು ಮಟ್ಟದ ಪತ್ರಕರ್ತರು) ಈ ರೀತಿಯ ಕೀಳು ಪತ್ರಿಕೋದ್ಯಮ ನಡೆಸಬೇಡಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾನು ಹೇಳಿದ್ದಿಷ್ಟೇ. ಇದು ಗಣತಂತ್ರ ದಿನದ ವಿಚಾರ. ಸಂವಿಧಾನವನ್ನು ಚೂರು ಮಾಡುತ್ತಿರುವ ಸರಕಾರ ಆತ್ಮಾವಲೋಕನ ನಡೆಸಬೇಕೆಂದು ಹೇಳಿದ್ದೆ. ನಿಮಗೆ ಅರ್ಥವಾಗಿರದೇ ಇರಲು ನಾನು ಯಾವ ರೀತಿಯ ಹಿಂದಿಯಲ್ಲಿ ಮಾತನಾಡಿದ್ದೇನೆ?" ಎಂದು ಅವರು ಮರುಪ್ರಶ್ನಿಸಿದ್ದಾರೆ.
ಈ ವೀಡಿಯೋ ವೈರಲ್ ಆಗಿದ್ದು ಕಾಂಗ್ರೆಸ್ ಬೆಂಬಲಿಗರು ಸುಪ್ರಿಯಾ ಶ್ರೀನಾಠೆ ತೋರಿದ ಧೈರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
बाहें चढ़ा कर दलाल (@AMISHDEVGAN) के गाल पर तगड़ा तमाचा दिया है।
— Lalan Kumar (@LalanKumarINC) January 14, 2021
जिंदाबाद @SupriyaShrinate जी!pic.twitter.com/v9PcT0POMv
ये कौन सी हिन्दी है जो तुम्हें समझ नही आयी ?@AMISHDEVGAN तुम नीछता कर रहे हो ।@SupriyaShrinate Ma'am thanks once again for Fully Bashing & Exposing how Godi Media Plays with words just to gain some TRPs.
— Ruhi (@R1Ruhi) January 13, 2021
More Power to you pic.twitter.com/kUYr0uLw6t
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.