ಸಾರಿಗೆ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ: ಆರ್ಬಿಐಗೆ ರಾಜ್ ಠಾಕ್ರೆ ಆಗ್ರಹ
ಮುಂಬೈ, ಜ.22: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ಕ್ಷೇತ್ರದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಆರ್ಬಿಐಯನ್ನು ಆಗ್ರಹಿಸಿದ್ದಾರೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಲಾಕ್ಡೌನ್ನಿಂದಾಗಿ ಸುಮಾರು 6 ತಿಂಗಳು ಸಾರಿಗೆ ಕ್ಷೇತ್ರ ಬಹುತೇಕ ಸ್ಥಬ್ಧವಾಗಿತ್ತು. ಈ ಕಾರಣದಿಂದ ಸಾರಿಗೆ ಕ್ಷೇತ್ರದವರಿಂದ ಸಾಲ ವಸೂಲು ಮಾಡುವಾಗ ಮೃದು ಧೋರಣೆ ತಳೆಯುವಂತೆ ಕೇಂದ್ರ ಸರಕಾರ ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್ಗಳಿಗೆ ಮಾರ್ಗಸೂಚಿ ಜಾರಿಗೊಳಿಸಿದೆ.
ಆದರೆ ಹಲವು ಬ್ಯಾಂಕ್ಗಳು ಇದನ್ನು ಪಾಲಿಸುತ್ತಿಲ್ಲ. ಕೆಲವು ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ನೋಟಿಸ್ ಜಾರಿಗೊಳಿಸಿ, ನೋಟಿಸ್ ಶುಲ್ಕ ಎಂದು 2,000 ರೂ. ಮೊತ್ತವನ್ನು ವಸೂಲು ಮಾಡುತ್ತಿದ್ದಾರೆ. ಆದ್ದರಿಂದ ಸಾರಿಗೆ ಕ್ಷೇತ್ರದ ಸಮಸ್ಯೆಯ ಬಗ್ಗೆ ಗಮನ ಹರಿಸಲು ಆರ್ಬಿಐ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಬೇಕು ಎಂದು ಠಾಕ್ರೆ ಕೇಂದ್ರ ಸರಕಾರ ಮತ್ತು ಆರ್ಬಿಐಗೆ ಪತ್ರ ಬರೆದಿದ್ದಾರೆ.