ಬ್ಯಾರಿಕೇಡ್ ಗಳನ್ನು ದಾಟಿ ದಿಲ್ಲಿಯ ಕೇಂದ್ರ ಭಾಗಕ್ಕೆ ಮುನ್ನುಗ್ಗುತ್ತಿರುವ ರೈತರು
ಹೊಸದಿಲ್ಲಿ,ಜ.26: ಭಾರತ ದೇಶವು 72ನೆ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ಈ ನಡುವೆ ಕೇಂದ್ರ ಸರಕಾರದ ನೂತನ ವಿವಾದಾತ್ಮಕ ಕೃಷಿಕಾಯ್ದೆಗಳ ವಿರುದ್ಧ ರೈತರು ದಿಲ್ಲಿಯಲ್ಲಿ ಟ್ರ್ಯಾಕ್ಟರ್ ಮಾರ್ಚ್ ಹಮ್ಮಿಕೊಂಡಿದ್ದಾರೆ. ಇದೀಗ ಪೊಲೀಸರು ಹಾಕಿರುವ ಬ್ಯಾರಿಕೇಡ್ ಗಳನು ದಾಟಿರುವ ರೈತರು ದಿಲ್ಲಿಯ ಕೇಂದ್ರ ಭಾಗಕ್ಕೆ ದಾಪುಗಾಲಿಡುತ್ತಿದ್ದಾರೆ ಎಂದು ndtv.com ವರದಿ ಮಾಡಿದೆ.
ನಂಗ್ಲೋಯಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಪೊಲೀಸರು ಹಾಕಿರುವ ಬ್ಯಾರಿಕೇಡ್ ಗಳನ್ನು ದಾಟಿದ್ದು, ಈಗಾಗಲೇ ದಿಲ್ಲಿಯ ಕೇಂದ್ರ ಭಾಗದತ್ತ ತಮ್ಮ ಟ್ರ್ಯಾಕ್ಟರ್ ರ್ಯಾಲಿಯನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ. ದಿಲ್ಲಿಯ ಅಕ್ಷರಧಾಮದಲ್ಲಿ ಪೊಲೀಸರು ಪ್ರತಿಭಟನಕಾರರ ವಿರುದ್ಧ ಅಶ್ರುವಾಯು ಪ್ರಯೋಗಸಿದ್ದು, ಲಾಠಿ ಚಾರ್ಜ್ ಕೂಡಾ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
#LIVE | Protesting farmers breach the barricades at Nangloi Junction, move towards Central Delhi. NDTV's Arvind Gunasekar reports from ground zero #TractorRally pic.twitter.com/7DKsrcNrRM
— NDTV (@ndtv) January 26, 2021