ನಕಲಿ ಸುದ್ದಿ, ಹಿಂಸಾಚಾರ ಹರಡಲು ಸಾಮಾಜಿಕ ಮಾಧ್ಯಮ ದುರುಪಯೋಗಪಡಿಸಿಕೊಂಡರೆ ಕಠಿಣ ಕ್ರಮ
ಸಂಸತ್ತಿನಲ್ಲಿ ಎಚ್ಚರಿಕೆ ನೀಡಿದ ಸಚಿವ ರವಿಶಂಕರ ಪ್ರಸಾದ್
ಹೊಸದಿಲ್ಲಿ:ನಕಲಿ ಸುದ್ದಿಗಳು, ಹಿಂಸಾಚಾರ ಹರಡಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಗುರುವಾರ ಸಂಸತ್ತಿನಲ್ಲಿ ಇಂದು ಎಚ್ಚರಿಕೆ ನೀಡಿದರು.
ನಾವು ಸಾಮಾಜಿಕ ಮಾಧ್ಯಮವನ್ನು ತುಂಬಾ ಗೌರವಿಸುತ್ತೇವೆ. ಇದು ಸಾಮಾನ್ಯ ಜನರಿಗೆ ಬಲ ನೀಡಿದೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮದಲ್ಲಿ ಸಾಮಾಜಿಕ ಮಾಧ್ಯಮದ ಪಾತ್ರ ದೊಡ್ಡದಿದೆೆ. ಆದಾಗ್ಯೂ, ನಕಲಿ ಸುದ್ದಿ, ಹಿಂಸಾಚಾರವನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಸಭೆಗೆ ಸಚಿವರು ತಿಳಿಸಿದರು.
Next Story