ಸುಪ್ರೀಂ ಮಾಜಿ ಸಿಜೆಐ ರಂಜನ್ ಗೊಗೊಯಿ ವಿರುದ್ಧ ʼನ್ಯಾಯಾಂಗ ನಿಂದನೆʼ ಪ್ರಕರಣ ದಾಖಲಿಸುವಂತೆ ಸಾಕೇತ್ ಗೋಖಲೆ ಆಗ್ರಹ
ಅಟಾರ್ನಿ ಜನರಲ್ ವೇಣುಗೋಪಾಲ್ ಗೆ ಪತ್ರ ಬರೆದ ಆರ್ಟಿಐ ಕಾರ್ಯಕರ್ತ
ಹೊಸದಿಲ್ಲಿ: ಇಂಡಿಯಾ ಟುಡೇ ಚಾನೆಲ್ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನ್ಯಾಯಾಲಯಗಳ ಕುರಿತು ಹಲವಾರು ಹೇಳಿಕೆ ನೀಡಿದ್ದರು. ಈ ಕುರಿತಾದಂತೆ ಇದೀಗ ಅವರ ವಿರುದ್ಧ ʼನ್ಯಾಯಾಂಗ ನಿಂದನೆʼ ಪ್ರಕರಣ ದಾಖಲಿಸುವ ಕುರಿತಾದಂತೆ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಭಾರತೀಯ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಗೆ ಪತ್ರ ಬರೆದಿದ್ದಾರೆ. ಈ ಕುರಿತಾದಂತೆ ಸಾಮಾಜಿಕ ತಾಣದಲ್ಲಿ ಸಾಕೇತ್ ಗೋಖಲೆ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜ್ಯಸಭೆಯ ಎಂಪಿ ಹಾಗೂ ಮಾಜಿ ಸುಪ್ರೀಂ ಮುಖ್ಯ ನ್ಯಾಯಾಧೀಶರು ನ್ಯಾಯಾಲಯಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ ಎಂದು ಅವರ ಹೇಳಿಕೆಗಳ ಕೆಲವು ಪಟ್ಟಿಯನ್ನು ಪತ್ರದಲ್ಲಿ ಸಾಕೇತ್ ಉಲ್ಲೇಖಿಸಿದ್ದಾರೆ.
"ನೀವು ೫ ಟ್ರಿಲಿಯನ್ ಎಕಾನಮಿಯನ್ನು ಬಯಸುತ್ತಿದ್ದೀರಿ. ಆದರೆ ದೇಶದ ನ್ಯಾಯಾಂಗವು ಕುಸಿದು ಬೀಳುವಂತಿದೆ", ನೀವು ನ್ಯಾಯಾಲಯಕ್ಕೆ ಹೋದರೆ ಅಲ್ಲಿ ನಿಮ್ಮ ಕೊಳೆಯಾದ ಬಟ್ಟೆಯನ್ನು ತೊಳೆಯಬೇಕೆ ಹೊರತು ನಿಮಗೆ ತೀರ್ಪು ಸಿಗುವುದಿಲ್ಲ. ಈ ಕುರಿತು ಹೇಳಲು ನನಗೆ ಯಾವ ಹಿಂಜರಿಕೆ ಇಲ್ಲ." ಮಿಲಿಯನ್ ಗಟ್ಟಲೆ ಹಣ ಹೊಂದಿರುವ ಕಾರ್ಪೊರೇಷನ್ ಗಳು ಮಾತ್ರ ಸುಪ್ರೀಂ ಕೋರ್ಟ್ ಗೆ ಹೋಗಬಹುದು., ನ್ಯಾಯಾಂಗವು ಸರಿಯಾಗಿ ಕಾರ್ಯ ನಿರ್ವಹಿಸದ್ದಕ್ಕೆ ಒಂದಲ್ಲ ಹಲವು ಕಾರಣಗಳಿವೆ." ಈ ರೀತಿಯಾದ ಹಲವಾರು ಹೇಳಿಕೆಗಳನ್ನು ಸಾಕೇತ್ ಗೋಖಲೆ ಪಟ್ಟಿ ಮಾಡಿದ್ದಾರೆ.
"ನೀವು ಈಗಾಗಲೇ ಕಾಮಿಡಿಯನ್ ಕುನಾಲ್ ಕಮ್ರ ಹಾಗೂ ಕಾರ್ಟೂನಿಸ್ಟ್ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದೀರಿ. ಆದರೆ, ರಂಜನ್ ಗೊಗೊಯಿ ಹೇಳಿಕೆಯು ಅದಕ್ಕಿಂತಲೂ ತೀವ್ರತರವಾಗಿದು, ಕೂಡಲೇ ಈ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ಬಯಸುತ್ತಿದ್ದೇನೆ" ಎಂದು ಸಾಕೇತ್ ಗೋಖಲೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Have written to Attorney General for India seeking sanction for contempt of court proceedings against former CJI Gogoi for statements made at the India Today Conclave.
— Saket Gokhale (@SaketGokhale) February 23, 2021
Sanction was given for harmless tweets by @kunalkamra88 & @sanitarypanels.
Why should a former CJI be special? pic.twitter.com/hiDwNBE6d8
Saket Gokhale Seeks Sanction from Attorney General KK Venugopal to initiate Contempt of Court against Former CJ #RanjanGogoi for his "“We want to have five trillion dollar economy but we have ramshackle judiciary" and other comments in his recent Speech.@SaketGokhale pic.twitter.com/l05ra9w6Wf
— Live Law (@LiveLawIndia) February 23, 2021