"ಬಂಗಾಳಕ್ಕೆ ತನ್ನ ಸ್ವಂತ ಮಗಳು ಮಾತ್ರ ಬೇಕು": ಬಿಜೆಪಿಗೆ ಪ್ರಶಾಂತ್ ಕಿಶೋರ್ ತಿರುಗೇಟು
ಹೊಸದಿಲ್ಲಿ: "ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಒಂದು ಪ್ರಮುಖ ಹೋರಾಟ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ ಹಾಗೂ ಬಂಗಾಳದ ಜನರು ತಮ್ಮ ಸಂದೇಶದೊಂದಿಗೆ ಸಿದ್ಧರಾಗಿದ್ದಾರೆ ಮತ್ತು ತಮ್ಮ ಸರಿಯಾದ ಕಾರ್ಡ್ ತೋರಿಸಲು ದೃಢಚಿತ್ತರಾಗಿದ್ದಾರೆ" ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಜ್ಞರಾದ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಐ-ಪ್ಯಾಕ್ ಎಂಬ ಸಂಸ್ಥೆ ನಡೆಸುತ್ತಿರುವ ಪ್ರಶಾಂತ್ ಕಿಶೋರ್, ಟಿಎಂಸಿಯ ಚುನಾವಣಾ ಘೋಷವಾಕ್ಯವನ್ನೂ ಟ್ವೀಟ್ನಲ್ಲಿ ಬರೆದಿದ್ದಾರೆ. "#ಬಾಂಗ್ಲಾನಿಜೆರ್ ಮೆಯೆಕೀಚಾಯ್ (ಬಂಗಾಳಕ್ಕೆ ತನ್ನ ಸ್ವಂತ ಮಗಳು ಮಾತ್ರ ಬೇಕು" ಎಂದು ಪ್ರಶಾಂತ್ ಕಿಶೋರ್ ಬರೆದಿದ್ದಾರೆ ಹಾಗೂ ಕೊನೆಗೆ "ಆನ್ ಮೇ 2 ಹೋಲ್ಡ್ ಮಿ ಟು ಮೈ ಲಾಸ್ಟ್ ಟ್ವೀಟ್" ಎಂದು ಅವರು ಬರೆದಿದ್ದಾರೆ.
ದೇಶಾದ್ಯಂತ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ಈ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆಯಿದೆ. ಈಗಾಗಲೇ ಎರಡೂ ಪಕ್ಷಗಳು ಹಲವು ವಿಚಾರಗಳಲ್ಲಿ ಪ್ರಖರ ವಾಗ್ದಾಳಿಯಲ್ಲಿ ತೊಡಗಿಕೊಂಡಿದ್ದು ಶುಕ್ರವಾರ ಚುನಾವಣಾ ಆಯೋಗ ರಾಜ್ಯದಲ್ಲಿ ಎಂಟು ಸುತ್ತಿನ ಚುನಾವಣೆ ಘೋಷಿಸಿರುವುದು ಆಡಳಿತ ಟಿಎಂಸಿಗೆ ವ್ಯಾಪಕ ಅಸಮಾಧಾನ ತಂದಿದೆ.
One of the key battles FOR DEMOCRACY in India will be fought in West Bengal, and the people of Bengal are ready with their MESSAGE and determined to show the RIGHT CARD - #BanglaNijerMeyekeiChay
— Prashant Kishor (@PrashantKishor) February 27, 2021
(Bengal Only Wants its Own Daughter)
PS: On 2nd May, hold me to my last tweet. pic.twitter.com/vruk6jVP0X