ವಂಶ ರಾಜಕೀಯದಿಂದಾಗಿ ದೇಶಾದ್ಯಂತ ಕಾಂಗ್ರೆಸ್ ಕುಸಿಯುತ್ತಿದೆ: ಅಮಿತ್ ಶಾ
ಪುದುಚೇರಿ: ಪುದುಚೇರಿಯಲ್ಲಿನ ಹಿಂದಿನ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಅವರು ಕೇಂದ್ರ ಸರಕಾರದ 15,000 ಕೋ.ರೂ.ವನ್ನು ಕಡಿತ ಮಾಡಿ ಗಾಂಧಿ ಕುಟುಂಬಕ್ಕೆ ನೀಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ಬಿಜೆಪಿಯ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ನಾರಾಯಣ ಸ್ವಾಮಿ ಅವರು ದಿಲ್ಲಿಯಲ್ಲಿ ಗಾಂಧಿ ಕುಟುಂಬದ ಸೇವೆ ಮಾಡುವತ್ತ ಹೆಚ್ಚು ಗಮನ ನೀಡುತ್ತಿದ್ದರು. ಕೇಂದ್ರ ಸರಕಾರದ ಹಣವನ್ನು ಕಡಿತ ಮಾಡಿ ಅವರಿಗೆ ನೀಡುತ್ತಿದ್ದರು ಎಂದು ಆರೋಪಿಸಿದರು.
ತನ್ನ ಸರಕಾರ ಬೀಳಲು ಬಿಜೆಪಿಯೇ ಕಾರಣ ಎಂಬ ನಾರಾಯಣ ಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾ, ವಂಶ ರಾಜಕೀಯದಿಂದಾಗಿ ದೇಶಾದ್ಯಂತ ಕಾಂಗ್ರೆಸ್ ಕುಸಿಯುತ್ತಿದೆ. ಹೀಗಾಗಿ ಹಿರಿಯ ನಾಯಕರು ಕಾಂಗ್ರೆಸ್ನ್ನು ತ್ಯಜಿಸುತ್ತಿದ್ದಾರೆ ಎಂದರು.
Next Story