ಜಾರ್ಖಂಡ್: ಐಇಡಿ ಸ್ಫೋಟ, ಮೂವರು ಭದ್ರತಾ ಸಿಬ್ಬಂದಿ ಸಾವು
ರಾಂಚಿ, ಮಾ. 3: ಜಾರ್ಖಂಡ್ನ ಸಿಂಗ್ಭೂಮ್ ಜಿಲ್ಲೆಯ ಅರಣ್ಯದಲ್ಲಿ ಗುರುವಾರ ಮಾವೋವಾದಿಗಳು ಐಇಡಿ ಸ್ಫೋಟಿಸಿದ ಪರಿಣಾಮ ಭದ್ರತಾ ಪಡೆಯ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಟೋಕ್ಲೋ ಪೊಲೀಸ್ ಠಾಣಾ ವ್ಯಾಪ್ತಿಯ ಹೊಯಾತು ಗ್ರಾಮದಲ್ಲಿ ಬೆಳಗ್ಗೆ 8.45ಕ್ಕೆ ಐಇಡಿ ಸ್ಫೋಟಿಸಿದ ಪರಿಣಾಮ ರಾಜ್ಯ ಪೊಲೀಸ್ ಜಾರ್ಖಂಡ್ ಜಾಗ್ವಾರ್ನ ವಿಶೇಷ ಘಟಕದ ಮೂವರು ಯೋಧರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ಫೋಟದಿಂದ ಜಾರ್ಖಂಡ್ ಜಾಗ್ವಾರ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ 197ನೇ ಬೆಟಾಲಿಯನ್ನ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಾರ್ಖಂಡ್ ಜಾಗ್ವಾರ್ ಹಾಗೂ ಸಿಆರ್ಪಿಎಫ್ನ ಜಂಟಿ ತಂಡ ಈ ಪ್ರದೇಶದಲ್ಲಿ ಮಾವೋವಾದಿ ನಿಗ್ರಹ ಕಾರ್ಯಾಚರಣೆ ನಡೆಸುತ್ತಿತ್ತು.
Next Story