ತಾಪ್ಸಿ ಜೊತೆಗಿರುವ ಫೋಟೊ ಪ್ರಕಟಿಸಿ ಐಟಿ ರೈಡ್ ಕುರಿತು ಪ್ರತಿಕ್ರಿಯಿಸಿದ ಅನುರಾಗ್ ಕಶ್ಯಪ್
ಹೊಸದಿಲ್ಲಿ: ಬಾಲಿವುಡ್ ನ ಖ್ಯಾತ ನಟಿ ತಾಪ್ಸಿ ಪನ್ನು ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ಬಳಿಕ ಹಲವಾರು ಆರೋಪಗಳನ್ನೂ ಮಾಡಿದ್ದರು. ಈ ಕುರಿತಾದಂತೆ ಇಂದು ತಾಪ್ಸಿ ಪನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಐಟಿ ದಾಳಿಯ ಕುರಿತು ವ್ಯಂಗ್ಯವಾಡಿದ್ದರು. ಇದೀಗ ನಿರ್ದೇಶಕ ಅನುರಾಗ್ ಕಶ್ಪಪ್ ಕೂಡಾ ಸಾಮಾಜಿಕ ತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಾಪ್ಸಿ ಜೊತೆಗೆ ಅನುರಾಗ್ ಕಶ್ಯಪ್ ಕುಳಿತಿರುವಂತಹ ಫೋಟೊವನ್ನು ಐಟಿ ರೈಡ್ ಬಳಿಕ ಸಾಮಾಜಿಕ ತಾಣದಲ್ಲಿ ಪ್ರಕಟಿಸಿ ಅವರನ್ನು ನಿಂದಿಸುತ್ತಿದ್ದವರಿಗೆ ಅದೇ ಫೋಟೊವನ್ನು ಮತ್ತೆ ಪ್ರಕಟಿಸಿ ಕಶ್ಯಪ್ ಉತ್ತರ ನೀಡಿದ್ದಾರೆ. ಫೋಟೊದೊಂದಿಗೆ "ನಾವು ದೊಬಾರಾ (ಸಿನಿಮಾದ ಹೆಸರು)ವನ್ನು ಮತ್ತೆ ಪ್ರಾರಂಭಿಸುತ್ತಿದ್ದೇವೆ. ನಮ್ಮ ವಿರೋಧಿಗಳಿಗೆ ನಮ್ಮ ಪ್ರೀತಿ ಸದಾ ಇರುತ್ತದೆ" ಎಂಬ ತಲೆಬರಹವನ್ನೂ ನೀಡಿದ್ದಾರೆ.
ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಕೇಂದ್ರ ಸರಕಾರದ ಕೆಲ ಜನವಿರೋಧಿ ಧೋರಣೆಗಳನ್ನು ಕಟು ಶಬ್ಧಗಳಲ್ಲಿ ಟೀಕಿಸಿದ್ದಕ್ಕಾಗಿ ಹಾಗೂ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಕ್ಕಾಗಿ ಅವರ ವಿರುದ್ದ ಐಟಿ ರೈಡ್ ನಡೆಸಲಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದರು.