ಬೈಕ್ ಉಪಕರಣಗಳನ್ನು ಕದ್ದ ಆರೋಪ: ಯುವಕನನ್ನು ಥಳಿಸಿ ಕೊಂದ ಗ್ರಾಮಸ್ಥರು
ರಾಂಚಿ: ಬೈಕ್ ನ ಚಕ್ರಗಳು ಹಾಗೂ ಬ್ಯಾಟರಿಯನ್ನು ಕದ್ದಿದ್ದಾನೆಂದು ಆರೋಪಿಸಿ ಯುವಕನೋರ್ವನನ್ನು ಸ್ಥಳೀಯರು ಸೇರಿ ಥಳಿಸಿ ಕೊಂದ ಘಟನೆ ಜಾರ್ಖಂಡ್ ನ ರಾಂಚಿ ಸಮೀಪದ ಅಂಗಾರಾ ಎಂಬ ಪ್ರದೇಶದಲ್ಲಿ ನಡೆದಿದೆ. ಕೊಲೆಗೈಯಲ್ಪಟ್ಟ ಯುವಕನನ್ನು ಮುಬಾರಕ್ ಖಾನ್ ಎಂದು ಗುರುತಿಸಲಾಗಿದೆ ಎಂದು ANI ಸುದ್ದಿಸಂಸ್ಥೆಯು ವರದಿ ಮಾಡಿದೆ.
ಈ ಕುರಿತು ಮಾತನಾಡಿದ ರಾಂಚಿ ಎಸ್ಪಿ ನೌಶಾದ್ ಆಲಂ, "ಮುಬಾರಕ್ ಖಾನ್ ಎಂಬ ವ್ಯಕ್ತಿಯು ಬೈಕ್ ನ ಚಕ್ರಗಳು ಮತ್ತು ಬ್ಯಾಟರಿಯನ್ನು ಕದ್ದಿದ್ದಾನೆಂದು ಆರೋಪಿಸಿ ಶನಿವಾರ ರಾತ್ರಿ ಸ್ಥಳೀಯರು ಆತನನ್ನು ಥಳಿಸಿ ಕೊಂದಿದ್ದಾರೆ. ಈ ಕುರಿತಾದಂತೆ ಈಗಾಗಲೇ ನಾವು 11 ಮಂದಿಯನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿಕೆ ನೀಡಿದ್ದಾರೆ.
Jharkhand | A person, Mubarak Khan, was beaten to death by locals in Angara area on allegations that he was stealing a tyre and battery of a bike on Saturday night. 11 people have been taken into custody & a case of murder has been registered: Ranchi SP (Rural) Naushad Alam https://t.co/EWeO4DMpE5 pic.twitter.com/tza0lz2QCM
— ANI (@ANI) March 14, 2021