ಬಂಗಾಳ ಚುನಾವಣೆ: ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾಗೆ ವೈ ಪ್ಲಸ್ ಸೆಕ್ಯೂರಿಟಿ
ಕೋಲ್ಕತಾ: ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸುತ್ತಿರುವ ಮಾಜಿ ಕ್ರಿಕೆಟಿಗ ಹಾಗೂ ಪಶ್ಚಿಮಬಂಗಾಳದ ಪೂರ್ವ ಮೇದಿನಿಪುರದ ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾ ಅವರ ಮೇಲೆ ದಾಳಿ ನಡೆದ ಕಾರಣ ಅವರಿಗೆ 'ವೈ ಪ್ಲಸ್' ಭದ್ರತೆಯನ್ನು ನೀಡಲಾಗಿದೆ.
ಎಪ್ರಿಲ್ 1ರಂದು ನಡೆಯಲಿರುವ ಪಶ್ಚಿಮಬಂಗಾಳದ 2ನೇ ಹಂತದ ಮತದಾನಕ್ಕೆ ಮೊದಲು ರೋಡ್ ಶೋ ನಡೆಸಿ ವಾಪಸಾಗುತ್ತಿದ್ದಾಗ ಅಶೋಕ್ ದಿಂಡಾ ಅವರ ಮೇಲೆ ದಾಳಿ ನಡೆಸಿ, ಅವರ ವಾಹನವನ್ನು ಹಾನಿಗೊಳಿಸಲಾಗಿತ್ತು.
ಈ ಘಟನೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಜಿಲ್ಲಾ ಅಧಿಕಾರಿಗಳಿಂದ ವರದಿ ಕೇಳಿದೆ.
ಅಶೋಕ್ ದಿಂಡಾ ರೋಡ್ ಶೋ ಮುಗಿಸಿ ಎಸ್ ಯುವಿ ಕಾರಿನಲ್ಲಿ ವಾಪಸಾಗುತ್ತಿದ್ದ ವೇಳೆ ಸಂಜೆ 4:30ರ ಸುಮಾರಿಗೆ ಅವರ ಮೇಲೆ ನೂರಾರು ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಅವರ ಕೈಯಲ್ಲಿ ಲಾಠಿಗಳು ಹಾಗೂ ರಾಡ್ ಗಳಿದ್ದವು. ಗುಂಪು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು, ದಿಂಡಾ ಅವರ ಭುಜಕ್ಕೆ ಗಾಯವಾಗಿದೆ ಎಂದು ದಿಂಡಾ ಅವರ ಮ್ಯಾನೇಜರ್ ತಿಳಿಸಿದ್ದಾರೆ.
Next Story