ಕೋಝಿಕೋಡ್ ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತುರ್ತು ಲ್ಯಾಂಡಿಂಗ್
ಕಾರ್ಗೋ ವಿಭಾಗದಿಂದ ಬೆಂಕಿ ಎಚ್ಚರಿಕೆ
ತಿರುವನಂತಪುರ: ಸರಕು ವಿಭಾಗವು ಬೆಂಕಿಯ ಎಚ್ಚರಿಕೆ ನೀಡಿದ ನಂತರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಶುಕ್ರವಾರ ಬೆಳಗ್ಗೆ ಕೋಝಿಕೋಡ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ.
ಪೈಲಟ್ ಗಳು ಕಾರ್ಗೊ ವಿಭಾಗದಿಂದ ಬೆಂಕಿಯ ಎಚ್ಚರಿಕೆಯನ್ನು ಸ್ವೀಕರಿಸಿದ ಬಳಿಕ ವಿಮಾನವನ್ನು ಮುನ್ನಚ್ಚರಿಕಾ ಕ್ರಮವಾಗಿ ಕೋಝಿಕೋಡ್ ಅಂತರ್ ರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ.
ವಿಮಾನವು ಕಲ್ಲಿಕೋಟೆಯಿಂದ ಕುವೈಟ್ಗೆ ತೆರಳುತ್ತಿದ್ದು, 17 ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಕ್ತಾರರು ದೃಢಪಡಿಸಿದ್ದಾರೆ.
Next Story