ಕುಂಭಮೇಳವನ್ನು ಸಮರ್ಥಿಸಿದ ಬಾಕ್ಸರ್ ಯೋಗೇಶ್ವರ್ ಗೆ ʼಪಂಚ್ʼ ನೀಡಿದ ಶೂಟರ್ ಅಭಿನವ್ ಬಿಂದ್ರಾ
photo: Thewire
ಹೊಸದಿಲ್ಲಿ: ದೇಶದಾದ್ಯಂತ ಕೊರೋನ ವೈರಸ್ ದೈನಂದಿನ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ದಿನವೂ ಎರಡೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದೆ. ಇಂದು ದೇಶದಾದ್ಯಂತ 1,492 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ನಡುವೆ ಉತ್ತರಾಖಂಡದಲ್ಲಿ ಕುಂಭಮೇಳ ನಡೆಯುತ್ತಿದ್ದು, ಹಲವಾರು ಮಂದಿಗೆ ಸೋಂಕು ಕಂಡು ಬಂದಿದೆ. ಈ ಕುರಿತಾದಂತೆ ಕುಂಭಮೇಳವನ್ನು ಸಮರ್ಥಿಸಿ ಪೋಸ್ಟ್ ಮಾಡಿದ್ದ ಬಾಕ್ಸರ್ ಯೋಗೇಶ್ವರ್ ದತ್ ಗೆ ಶೂಟರ್ ಅಭಿನವ್ ಬಿಂದ್ರಾ ಟ್ವಿಟರ್ ನಲ್ಲೇ ತಿರುಗೇಟು ನೀಡಿದ್ದಾರೆ.
"ಕುಂಭಮೇಳಕ್ಕೆ ಯಾರೂ ಅಕ್ರಮವಾಗಿ ಪ್ರವೇಶ ಮಾಡಿಲ್ಲ. ಜನರು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ. ಮೆಡಿಕಲ್ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಯಾರೂ ಉಗುಳುತ್ತಿಲ್ಲ. ಆಡಳಿತಕ್ಕೆ ಹೆದರಿ ಪಲಾಯನವನ್ನೂ ಮಾಡಿಲ್ಲ. ಕುಂಭಮೇಳದ ಶಾಂತಿಯುತ ಭಕ್ತರನ್ನು ಮಾನಹಾನಿ ಮಾಡಬೇಡಿ" ಎಂದು ಒಲಿಂಪಿಕ್ ಪದಕ ವಿಜೇತ ಯೋಗೇಶ್ವರ್ ದತ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಒಲಿಂಪಿಕ್ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, "ಸಾಂಕ್ರಾಮಿಕ ರೋಗವೊಂದು ದೇಶಕ್ಕೆ ಹಾನಿ ಮಾಡುತ್ತಿರುವ ಸಂದರ್ಭದಲ್ಲಿ ಕುಂಭಮೇಳದ ಅಗತ್ಯವಿತ್ತೇ? ವೈರಸ್ ಯಾವತ್ತೂ ಧರ್ಮಗಳ ನಡುವೆ ಬೇಧ ಭಾವ ಮಾಡುವುದಿಲ್ಲ. ಅಥ್ಲೀಟ್ ಗಳು ತಮ್ಮ ಗುರಿಯ ಮೇಲೆ ಕಣ್ಣಿಡಬೇಕು. ಇಂತಹಾ ಪ್ರಮುಖ ಸಂದರ್ಭಗಳಲ್ಲಿ ಜನರ ಜೀವ ರಕ್ಷಿಸುವುದರಲ್ಲಿ ನಮ್ಮ ಗಮನ ಅಚಲವಾಗಿರಬೇಕು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಮೇಲೆ ಸಹಾನುಭೂತಿ ವ್ಯಕ್ತಪಡಿಸಬೇಕು. ನೀವು ಸಂಪೂರ್ಣ ಕ್ರೀಡಾ ಸಮುದಾಯವನ್ನೇ ವೈಫಲ್ಯಕ್ಕೊಳಪಡಿಸುತ್ತಿದ್ದೀರಿ" ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಯೋಗೇಶ್ವರ ದತ್, "ಕುಂಭಮೇಳವನ್ನು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡೇ ನಡೆಸಲಾಗಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ರ ಮೇಲ್ವಿಚಾರಣೆಯಲ್ಲಿ ಕುಂಭಮೇಳ ನಡೆಯುತ್ತಿದೆ. ಇನ್ನು ಕ್ರೀಡೆಯಲ್ಲಿನ ಪ್ರಾತಿನಿಧ್ಯ ಕೇವಲ ಒಬ್ಬ ಆಟಗಾರನ ಆಸ್ತಿಯಲ್ಲ" ಎಂದು ಹೇಳಿದ್ದಾರೆ.
No one in the Kumbh Mela is reaching there illegally, people are following all protocols, no one is spitting at the security and medical staff, no one is running away after hiding from the administration.
— Yogeshwar Dutt (@DuttYogi) April 14, 2021
Stop defaming the peaceful devotees at Kumbh. #ThankuTirathJi
Should the Khumb mela even be held while an infectious pandemic lays waste to india? A virus does not discriminate between religions.
— Abhinav A. Bindra OLY (@Abhinav_Bindra) April 17, 2021
Athletes r knownto keep their eye on the ball,their focus unwavering &to not get distracted by wht is most important at this time-saving lives,finding curesTHAT can work &showing compassion &empathy4those who r loosing loved ones.U r failing the entire sports community with this
— Abhinav A. Bindra OLY (@Abhinav_Bindra) April 17, 2021
कुंभ मेले का आयोजन महामारी को ध्यान में रख कर और सभी जरूरी दिशा निर्देशो के बाद किया गया वह भी आदरणीय प्रधानमंत्री श्री @narendramodi और मुख्यमंत्री श्री @TIRATHSRAWAT की देखरेख में। और हां, खेल जगत का प्रतिनिधित्व किसी एक भी खिलाड़ी की जायदाद मात्र नहीं है।
— Yogeshwar Dutt (@DuttYogi) April 18, 2021