ನಾವು ಅಸಹಾಯಕರಾಗಿದ್ದೇವೆ, ಇಂತಹ ಪರಿಸ್ಥಿತಿ ಈ ಹಿಂದೆ ನೋಡಿಲ್ಲ:ಕಣ್ಣೀರಿಟ್ಟ ಮುಂಬೈ ವೈದ್ಯೆ
"ಅನೇಕ ಯುವಕರೂ ಕೊರೋನ ಸೋಂಕಿಗೆ ಒಳಗಾಗಿದ್ದಾರೆ"
ಮುಂಬೈ: "ನಾವು ಅಸಹಾಯಕರಾಗಿದ್ದೇವೆ ... ಇಂತಹ ಪರಿಸ್ಥಿತಿಯನ್ನು ಈ ಹಿಂದೆ ನೋಡಿಲ್ಲ ... ಜನರು ಭಯಭೀತರಾಗಿದ್ದಾರೆ ..." – ಇದು ಅತಿಯಾದ ಕೆಲಸ ದಿಂದ ಬಸವಳಿದಿದ್ದ ಮುಂಬೈ ವೈದ್ಯೆಯ ಕಣ್ಣೀರು ತುಂಬಿದ ಹತಾಶ ಮಾತುಗಳು.
ಆಸ್ಪತ್ರೆ ಬೆಡ್ ಗಳ ಕೊರತೆ, ಹಿಂದೆಂದೂ ಕಾಣದ ದೈನಂದಿನ ಹೊಸ ಕೊರೋನ ಕೇಸ್ ಗಳು, ಲಸಿಕೆಗಳ ಕೊರತೆ, ಅತ್ಯಂತ ಪ್ರಮುಖ ಔಷಧ ರೆಮೆ್ಡಿ ಸಿವಿರ್ ಹಾಗೂ ಆಕ್ಸಿಜನ್ ಬಿಕ್ಕಟ್ಟಿನ ನಡುವೆ ಸಾಂಕ್ರಾಮಿಕ ರೋಗದ ವಿಶೇಷ ತಜ್ಞೆ ಡಾ. ತೃಪ್ತಿ ಗಿಲಾಡಾ ಅವರ ಮನವಿಯ ವೀಡಿಯೊ ಮಂಗಳವಾರ ಹೆಚ್ಚು ವೈರಲ್ ಆಗಿದೆ.
ವಿಶ್ವದ ಅತ್ಯಂತ ದೊಡ್ಡ ನಗರದಲ್ಲಿ ಕೋವಿಡ್-19 ರೋಗಿಗಳು ತುಂಬಿ ತುಳುಕುತ್ತಿದ್ದು, ವೈದ್ಯಕೀಯ ಮೂಲಭೂತ ಸೌಕರ್ಯದ ಕೊರತೆ ಎದುರಾಗಿದೆ.
"ನಾನು ಈ ರೀತಿಯ ಪರಿಸ್ಥಿತಿ ಈ ತನಕ ನೋಡಿಲ್ಲ ... ನಾವು ತುಂಬಾ ಅಸಹಾಯಕರಾಗಿದ್ದೇವೆ. ಅನೇಕ ವೈದ್ಯರಂತೆ ನಾನು ತೊಂದರೆಗೀಡಾಗಿದ್ದೇನೆ ... ಏನು ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ ... ನನ್ನ ಹೃದಯ ಮುರಿದಿದೆ. ಬಹುಶಃ ನಾನು ನಿಮಗೆ ಏನು ಚಿಂತೆ ಮಾಡುತ್ತೇನೆ ಎಂದು ಹೇಳಿದರೆ ... ನಾನು ನಿಮಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದರೆ, ನಾನು ಹೆಚ್ಚು ಶಾಂತಿಯಿಂದಿರಬಹುದು "ಎಂದು ಡಾ. ತೃಪ್ತಿ ಗಿಲಾಡಾ ಐದು ನಿಮಿಷಗಳ ವೀಡಿಯೊದ ಆರಂಭದಲ್ಲಿ ಹೇಳುತ್ತಾರೆ.
"ನಾವು ಅನೇಕ ರೋಗಿಗಳನ್ನು ನಿರ್ವಹಿಸಬೇಕಾಗಿದೆ ... ಹಾಸಿಗೆಗಳಿಲ್ಲದ ಕಾರಣ ಗಂಭೀರ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ... ನಾವು ಇದನ್ನು ಆನಂದಿಸುತ್ತಿಲ್ಲ ..." ಎಂದು ಕಣ್ಣೀರಿಡುತ್ತಾ ಡಾ.ತೃಪ್ತಿ ಹೇಳಿದ್ದಾರೆ.
"ಮೊದಲು ... ದಯವಿಟ್ಟು ಸುರಕ್ಷಿತವಾಗಿರಿ. ನೀವು ಇನ್ನೂ ಕೋವಿಡ್ ಸೋಂಕಿಗೆ ಒಳಗಾಗದೇ ಇದ್ದರೆ ... ಅಥವಾ ನೀವು ಸೋಂಕಿಗೆ ಒಳಗಾಗಿದ್ದರೂ ಚೇತರಿಸಿಕೊಂಡಿದ್ದರೆ ... ನೀವು ಸೂಪರ್ ಹೀರೋ ಅಥವಾ ನಿಮಗೆ ಸ್ವಲ್ಪ ವಿನಾಯಿತಿ ಇದೆ ಎಂದು ಭಾವಿಸಬೇಡಿ ... ನಾವು ಅನೇಕ ಯುವ ಜನರು ಸೋಂಕಿಗೆ ಒಳಗಾಗುವುದನ್ನು ನೋಡುತ್ತಿದ್ದೇವೆ ಹಾಗೂ ನಾವು ಅವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಕೋವಿಡ್ ಎಲ್ಲ ಕಡೆಯೂ ಇದೆ. ನೀವು ಮನೆಯಿಂದ ಯಾವುದೇ ಕೆಲಸಕ್ಕೆ ಹೊರಟರೂ ಮಾಸ್ಕ್ ಅನ್ನು ಧರಿಸಿ"ಎಂದು ಡಾ.ತೃಪ್ತಿ ಹೇಳಿದ್ದಾರೆ.
Mumbai doctor breaks down in tears, says ‘’I have never seen anything like this, we are helpless!’’
— Puja Bharadwaj (@Pbndtv) April 20, 2021
Dr.Trupti Gilada, Infectious Diseases Physician. pic.twitter.com/jngqU5hSTH