ನಮ್ಮಂತೆಯೇ ಕೊರೋನ ವೈರಸ್ ಗೂ ಬದುಕುವ ಹಕ್ಕಿದೆ: ಉತ್ತರಾಖಂಡ ಮಾಜಿ ಮುಖ್ಯಮಂತ್ರಿ
ಡೆಹ್ರಾಡೂನ್: ಕೊರೋನ ವೈರಸ್ ಒಂದು ಜೀವಂತ ವಸ್ತುವಾಗಿದ್ದು, ಅದಕ್ಕೂ ನಮ್ಮಂತೆಯೇ ಬದುಕುವ ಹಕ್ಕಿದೆ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿಕೆ ನೀಡಿದ್ದಾರೆ.
"ಒಂದು ತಾತ್ವಿಕ ದೃಷ್ಟಿಕೋನದಿಂದ ನಾವು ನೋಡಿದರೆ, ಕೊರೋನ ವೈರಸ್ ಕೂಡಾ ಒಂದು ಜೀವಂತವಾಗಿರುವ ಜೀವಿಯಾಗಿದೆ. ಅದು ಕೂಡಾ ಉಳಿದವರಂತೆ ಬದುಕುವ ಹಕ್ಕನ್ನು ಹೊಂದಿದೆ. ಆದರೆ ನಾವು ಮಾನವರು ನಾವು ಮಾತ್ರ ಅತ್ಯಂತ ಬುದ್ಧಿವಂತರು ಎಂದು ಭಾವಿಸಿಕೊಂಡು ಅದನ್ನು ನಿರ್ಮೂಲನೆ ಮಾಡಲು ಹೊರಟಿದ್ದೇವೆ. ಆದ್ದರಿಂದಲೇ ಅದು ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ" ಎಂದು ಖಾಸಗಿ ಸುದ್ದಿ ಚಾನೆಲ್ ಗೆ ರಾವತ್ ತಿಳಿಸಿದ್ದಾರೆ.
ಹೇಗಾದರೂ, ಮನುಷ್ಯ ಸುರಕ್ಷಿತವಾಗಿರಲು ವೈರಸ್ ಅನ್ನು ಮೀರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
Next Story