ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಸಹೋದರ ಕೋವಿಡ್ ನಿಂದ ನಿಧನ
ಹೊಸದಿಲ್ಲಿ: ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರ ಸಹೋದರ ಜಿತೇಂದರ್ ಬಲ್ಯಾನ್ ಅವರು ದಿಲ್ಲಿಯ ಏಮ್ಸ್ ನಲ್ಲಿ ಮಂಗಳವಾರ ಕೋವಿಡ್-19 ಕಾರಣದಿಂದ ನಿಧನರಾದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯಲ್ಲಿ ಕೇಂದ್ರ ಸಚಿವರ ಸೋದರಸಂಬಂಧಿಯಾಗಿದ್ದ ಜಿತೇಂದರ್ ಬಲ್ಯಾನ್ ಅವರು ಮುಝಫ್ಫರ್ ನಗರ ಜಿಲ್ಲೆಯ ಕುಟ್ಬಾ ಗ್ರಾಮದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು.
ಚುನಾವಣಾ ಪ್ರಚಾರದ ಸಮಯದಲ್ಲಿ ಬಲ್ಯಾನ್ ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರು ಹಾಗೂ ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
Next Story