ಗೆಲುವು, ಸೋಲು ಎರಡರಿಂದಲೂ ಕಲಿಯಿರಿ: ಉತ್ತರ ಪ್ರದೇಶ ಚುನಾವಣೆಗೆ ಮೊದಲು ಪಕ್ಷಕ್ಕೆ ಪ್ರಧಾನಿ ಸಂದೇಶ
ಹೊಸದಿಲ್ಲಿ: ಐದು ರಾಜ್ಯಗಳಲ್ಲಿ ನಡೆಯಲಿರುವ ಮುಂದಿನ ಸುತ್ತಿನ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿರುವುದರಿಂದ ಗೆಲುವು ಹಾಗೂ ಸೋಲು ಎರಡರಲ್ಲೂ ಪಾಠ ಕಲಿಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಉತ್ತರಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ. ರಾಜಕೀಯವಾಗಿ ದೇಶದ ಅತ್ಯಂತ ನಿರ್ಣಾಯಕ ರಾಜ್ಯ ಇದಾಗಿದೆ. ಈ ರಾಜ್ಯವು ಗರಿಷ್ಠ ಸಂಖ್ಯೆಯ ಸಂಸದರನ್ನು ಸಂಸತ್ತಿಗೆ ಕಳುಹಿಸುತ್ತದೆ ಹಾಗೂ ದಿಲ್ಲಿಯಲ್ಲಿ ಸರಕಾರದ ರಚಿಸಲು ಈ ರಾಜ್ಯ ಪ್ರಮುಖ ಪಾ್ತ್ರವಹಿಸುತ್ತದೆ.
"ಇದು ಸೋಲೇ ಆಗಲಿ ಅಥವಾ ಗೆಲುವೇ ಆಗಿರಲಿ, ಅದರಿಂದ ಪಾಠವನ್ನು ಕಲಿಯಿರಿ ಹಾಗೂ ಮುಂಬರುವ ಚುನಾವಣೆಗೆ ತಯಾರಿ ಪ್ರಾರಂಭಿಸಿ" ಎಂದು ಪ್ರಧಾನಿ ಅಧಿಕೃತ ನಿವಾಸದಲ್ಲಿ ನಿನ್ನೆ ಸಂಜೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಧಾನಿ ಮೋದಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯು ಬಿಜೆಪಿಗೆ ಮಿಶ್ರ ಫಲ ನೀಡಿದೆ. ಪಕ್ಷವು ಅಸ್ಸಾಂ ಅನ್ನು ಉಳಿಸಿಕೊಂಡು ಪುದುಚೇರಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, 200 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಬೇಕೆಂದು ಆಶಿಸುತ್ತಿದ್ದ ಪಶ್ಚಿಮಬಂಗಾಳದಲ್ಲಿ ಸೋಲನುಭವಿಸಿತ್ತು.