ಸಂಬಿತ್ ಪಾತ್ರಾ ಜೊತೆಗಿನ ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ʼನೀವು ಗಾಂಧಿ ಹಂತಕನಿಗೆ ಮಂದಿರ ಕಟ್ಟಿದವರುʼ ಎಂದ ಟಿಕಾಯತ್
ತಡವಾಗಿ ಬೆಳಕಿಗೆ ಬಂದ ವೀಡಿಯೊ ವೈರಲ್
screengrab from twitter video
ಹೊಸದಿಲ್ಲಿ: ಇತ್ತೀಚೆಗೆ ರೈತ ನಾಯಕ ರಾಕೇಶ್ ಟಿಕಾಯತ್ ಅವರು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಭಾಗಿಯಾಗಿದ್ದ ಆಜ್ ತಕ್ ವಾಹಿನಿಯ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, "ಮಹಾತ್ಮಾ ಗಾಂಧಿಯನ್ನು ಕೊಂದವನಿಗೆ ದೇವಾಲಯ ಕಟ್ಟಿದವರು ನೀವುʼ ಎಂದು ಹೇಳಿದರಲ್ಲದೇ ಪಾತ್ರಾರನ್ನುದ್ದೇಶಿಸಿ ʼಬೇಹುಡಾ' (ಮತಿಹೀನ) ಎಂದು ಜರೆದಿರುವುದು ತಡವಾಗಿ ಸುದ್ದಿಯಾಗಿದೆ. ಟಿಕಾಯತ್ ಅವರು ಬಿಜೆಪಿ ನಾಯಕರೊಬ್ಬರನ್ನು ನಿಂದಿಸಿ ಮಾಡಿರುವ ಈ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮದ ನಿರೂಪಕಿ ಚಿತ್ರಾ ತ್ರಿಪಾಠಿ ಅವರನ್ನುದ್ದೇಶಿಸಿ ಮಾತನಾಡಿದ ಟಿಕಾಯತ್ "ಚಿತ್ರಾ ಜಿ ನಾನು ನಿಮ್ಮ ಜತೆ ಮಾತ್ರ ಮಾತನಾಡುತ್ತೇನೆ. ನನಗೆ ಇಂತಹ ಬೇಹುಡಾ (ಮತಿಹೀನ) ಜನರೊಂದಿಗೆ ಮಾತನಾಡುವುದು ಇಷ್ಟವಿಲ್ಲ, ನಾನು ಕೇವಲ ನಿಮ್ಮ ಜತೆ ಮಾತ್ರ ಮಾತನಾಡುತ್ತೇನೆ," ಎಂದರು. ಪ್ರಾರಂಭದಲ್ಲಿ ಕೇಂದ್ರ ಸರಕಾರದ ಕಾರ್ಯವೈಖರಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಬಿಜೆಪಿಯ ನಿಲುವುಗಳನ್ನು ಖಂಡಿಸಿದರು.
ಸಂಬಿತ್ ಪಾತ್ರ ಅವರನ್ನು ಟಿವಿ ಪರದೆಯಿಂದ ತೆಗೆಯುವಂತೆ ಟಿಕಾಯತ್ ಸೂಚಿಸುತ್ತಾ "ಹಠಾವೋ ಇಸ್ಕೋ" ಎಂದು ಸಿಟ್ಟಿನಿಂದ ಹೇಳಿದರು.
ತಮ್ಮನ್ನು ಸಾರ್ವಜನಿಕವಾಗಿ ನಿಂದಿಸಲು ರೈತ ನಾಯಕನಿಗೆ ಅನುಮತಿಸಿದ ಟಿವಿ ನಿರೂಪಕಿಯನ್ನು ನಂತರ ಸಂಬಿತ್ ಪಾತ್ರ ತರಾಟೆಗೆ ತೆಗೆದುಕೊಂಡು "ಚಿತ್ರಾ ಜಿ ಇದು ಸರಿಯಲ್ಲ. ನಾನು ಟಿವಿ ಪರದೆಯಲ್ಲಿ ಕಾಣಿಸಿರುವಾಗ ನನ್ನ ಮೇಲೆ ನಿಂದನೆಗಳನ್ನು ಸುರಿಯಲಾಗುತ್ತಿದೆ. ಇದು ಯಾವ ವಿಧದ ಅಹಂಕಾರ?" ಎಂದು ಪ್ರಶ್ನಿಸಿದರು.
Tikait ji dil jeet liya .. kon hai ye behuda aadmi hatao isse . Dumbit patra naam hai ji pic.twitter.com/tl0zdRuKZs
— Reva (@Sushsush10) June 18, 2021