ಪೆಗಾಸಸ್ ತನಿಖೆ ಕೋರಿರುವ ಅರ್ಜಿ ಮುಂದಿನ ವಾರ ಆಲಿಸಬಹುದು: ಮುಖ್ಯ ನ್ಯಾಯಮೂರ್ತಿ ರಮಣ
ಹೊಸದಿಲ್ಲಿ: ಪ್ರತಿಪಕ್ಷದ ರಾಜಕಾರಣಿಗಳು, ಪತ್ರಕರ್ತರು ಹಾಗೂ ಇತರರು ಇಸ್ರೇಲಿ ಸ್ಪೈವೇರ್ಗಳ ಬೇಹುಗಾರಿಕೆಗೆ ಗುರಿಯಾಗಿದ್ದಾರೆ ಎಂಬ ಆರೋಪಗಳನ್ನು ಒಳಗೊಂಡ ಪೆಗಾಸಸ್ ಹಗರಣದ ಕುರಿತು ವಿಶೇಷ ತನಿಖೆಯ ಕೋರಿಕೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳಬಹುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಇಂದು ಹೇಳಿದರು.
ಹಿರಿಯ ಪತ್ರಕರ್ತರಾದ ಎನ್. ರಾಮ್ ಮತ್ತು ಶಶಿಕುಮಾರ್ ಅವರು ಬೇಹುಗಾರಿಕೆ ಆರೋಪದ ಕುರಿತು ತನಿಖೆಗೆ ಮಾಜಿ ನ್ಯಾಯಾಧೀಶರ ನೇತೃತ್ವದ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ನೇಮಿಸಬೇಕೆಂದು ಕೋರಿ ಸುಪ್ರೀಕೋರ್ಟ್ ಗೆ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪಟ್ಟಿ ಮಾಡುವಂತೆ ಹಿರಿಯ ಪತ್ರಕರ್ತರ ಪರ ವಕೀಲ ಕಪಿಲ್ ಸಿಬಲ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದರು.
"ಕೆಲಸದ ಹೊರೆಗೆ ಅನುಗುಣವಾಗಿ ಮುಂದಿನ ವಾರ ಈ ಅರ್ಜಿಯನ್ನು ಆಲಿಸಬಹುದು" ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.
Next Story