ಹಿಂದೂ ದೇವತೆಗಳಿಗೆ ಅವಮಾನ ಆರೋಪ: ʼಕಾಮಸೂತ್ರʼ ಗ್ರಂಥವನ್ನು ಸುಟ್ಟು ಹಾಕಿದ ಬಜರಂಗದಳ ಕಾರ್ಯಕರ್ತರು
Photo: twitter/dpBhattaET
ಅಹ್ಮದಾಬಾದ್: ಹಿಂದೂ ದೇವ ದೇವತೆಗಳನ್ನು ಅಶ್ಲೀಲವಾಗಿ ತೋರಿಸುತ್ತಿದೆ ಎಂದು ಆರೋಪಿಸಿ ʼಕಾಮಸೂತ್ರʼ ಗ್ರಂಥವನ್ನು ಪುಸ್ತಕ ಮಳಿಗೆಯೊಂದರ ಮುಂಭಾಗದಲ್ಲಿ ಸುಟ್ಟು ಹಾಕಿದ ಘಟನೆಯು ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದಿದೆ. ಭಾರತೀಯ ಪುರಾತನ ತತ್ವಜ್ಞಾನಿ ವಾತ್ಸಾಯನ ಸಂಸ್ಕೃತ ಭಾಷೆಯಲ್ಲಿ ಪ್ರೀತಿ ಮತ್ತು ಲೈಂಗಿಕತೆಯ ಕುರಿತು ಬರೆದ ಗ್ರಂಥವಾಗಿದೆ ಇದು.
ಪುಸ್ತಕವನ್ನು ಸುಡುವ ವೇಳೆ ನೆರೆದಿದ್ದ ಕಾರ್ಯಕರ್ತರು ಜೈಶ್ರೀರಾಂ ಹಾಗೂ ಹರಹರ ಮಹಾದೇವ್ ಘೋಷಣೆಗಳನ್ನು ಕೂಗುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಯಾವ ಪುಸ್ತಕ ಮಳಿಗೆಯನ್ನು ಗುರಿಯಾಗಿಸಿದ್ದರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು scroll.in ವರದಿ ಮಾಡಿದೆ.
ಇನ್ನು ಮುಂದೆ ವಾತ್ಸಾಯನ ಕಾಮಸೂತ್ರ ಪುಸ್ತಕವನ್ನು ಮಳಿಗೆಯಲ್ಲಿ ಮಾರಾಟ ಮಾಡಿದರೆ ಸಂಪೂರ್ಣ ಪುಸ್ತಕ ಮಳಿಗೆಯನ್ನೇ ಸುಟ್ಟು ಹಾಕುವುದಾಗಿ ಬಜರಂಗದಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ ಎಂದು indiatoday ವರದಿ ತಿಳಿಸಿದೆ.
Breaking #Bajrangdal members burnt copy of #Kamasutra in an Ahmedabad bookstall for “showing Hindu deities in ‘vulgar’ positions” and threatened to burn bookstalls down if Hindu sentiments are hurt in future 1/N pic.twitter.com/4jpHZTognM
— DP (@dpbhattaET) August 28, 2021
Vatsayana’s Kaamsutra has been a pride of India for centuries as has been the sculptures of Ajanta Ellora Khajuraho and Konark. So what do we expect? Bamiyan Buddha style demolition of all Indian heritage? 2/N pic.twitter.com/HX4vwHWlOV
— DP (@dpbhattaET) August 28, 2021