ತಕ್ಷಣವೇ ಕಾಂಗ್ರೆಸ್ ನಾಯಕತ್ವ ಬದಲಾಗಬೇಕು: ಶಶಿ ತರೂರ್ ಆಗ್ರಹ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷಕ್ಕೆ ಹೊಸ ನಾಯಕತ್ವ ಬೇಕಾಗಿದೆ ಎಂದು ತಿರುವನಂತಪುರದ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಸೋನಿಯಾ ಗಾಂಧಿಯವರ ಬಗ್ಗೆ ಯಾರೂ ಒಂದು ಶಬ್ದ ಮಾತನಾಡುವುದಿಲ್ಲ. ಆದರೆ ಅವರು ಸ್ವತಃ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ. ಹೊಸ ನಾಯಕತ್ವವು ಶೀಘ್ರವೇ ಅಧಿಕಾರವಹಿಸಿಕೊಳ್ಳಬೇಕು. ಒಂದುವೇಳೆ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಬಯಸಿದರೆ ಅದು ತಕ್ಷಣವೇ ಆಗಬೇಕು ಎಂದು ಹೇಳಿದರು.
Next Story