ದಿಲ್ಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ : ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರನ ಬಂಧನಕ್ಕೆ ಆಗ್ರಹ
ಹೊಸದಿಲ್ಲಿ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಈ ವಾರ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವನ್ನು ಖಂಡಿಸಿ ನಡೆದ ಪ್ರತಿಭಟನೆಯ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಮಧ್ಯಾಹ್ನ ದಿಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಕೊಲೆ ಆರೋಪ ಎದುರಿಸುತ್ತಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಮಗನನ್ನು ಬಂಧಿಸಲು ಆಗ್ರಹಿಸಿದ್ದಾರೆ.
ರಾಷ್ಟ್ರದ ರಾಜಧಾನಿಯ ಬೀದಿಗಳಲ್ಲಿ ಹತ್ತಾರು ಜನರು ಘೋಷಣೆಗಳನ್ನು ಕೂಗುವುದು ಮತ್ತು ಸುಟ್ಟ ಪ್ರತಿಕೃತಿ ಮೇಲೆ ಜಿಗಿಯುವುದನ್ನು ಸುದ್ದಿ ಸಂಸ್ಥೆ ANI ಯ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಹಾಗೂ ಲಖಿಂಪುರ್ ಖೇರಿ ಸಾವು ಪ್ರಕರಣದಲ್ಲಿ ಕೊಲೆ ಆರೋಪಿ (ಯುಪಿ ಪೋಲಿಸ್ ಎಫ್ಐಆರ್ ಪ್ರಕಾರ) ಆಶಿಶ್ ಮಿಶ್ರಾ ಬಂಧನಕ್ಕೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರಕಾರ ಮತ್ತು ಪೊಲೀಸರ ಪ್ರಕರಣದ ನಿರ್ವಹಣೆಯನ್ನು ಪ್ರಶ್ನಿಸಿತ್ತು ಹಾಗೂ ತನಿಖೆಗಳ ಸ್ಥಿತಿಗತಿ ವರದಿ ಕೇಳಿತ್ತು.
Delhi | Indian Youth Congress workers hold protest demonstration over Lakhimpur Kheri violence pic.twitter.com/9Z8tB8nJLm
— ANI (@ANI) October 9, 2021