ಲಖಿಂಪುರ ಖೇರಿ ಹಿಂಸಾಚಾರ: ಮೃತಪಟ್ಟ ರೈತರಿಗೆ ಅಂತಿಮ ಪ್ರಾರ್ಥನೆ ಸಲ್ಲಿಸಿದ ಪ್ರಿಯಾಂಕಾ ಗಾಂಧಿ
ಲಕ್ನೊ: ಅಕ್ಟೋಬರ್ 3 ರಂದು ನಡೆದಿದ್ದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರ 'ಅಂತಿಮ್ ಅರ್ದಾಸ್' (ಅಂತಿಮ ಪ್ರಾರ್ಥನೆ) ನಡೆಯುತ್ತಿರುವ ಲಖಿಂಪುರ ಖೇರಿಯ ಪರಿಸರದಲ್ಲಿ ಮಂಗಳವಾರ ಬಿಗಿ ಬಂದೋಬಸ್ತ್ ಮಾಡಲಾಗಿದ್ದು. ಪಂಜಾಬ್, ಹರಿಯಾಣ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ಇತರ ಭಾಗಗಳಿಂದ ಸಾವಿರಾರು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಗೆ ಹರಿದು ಬರುತ್ತಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೃತ ರೈತರು ಹಾಗೂ ಪತ್ರಕರ್ತ ರಮಣ್ ಕಶ್ಯಪ್ ಅವರಿಗೆ ಗೌರವ ಸಲ್ಲಿಸಿದರು.
Watch: @priyankagandhi attends 'ardas' for victims in #LakhimpurKheri
— The Indian Express (@IndianExpress) October 12, 2021
Live Updates: https://t.co/g4borJpEwf pic.twitter.com/NkcHig3EEX
Next Story