ಲಖಿಂಪುರ ಖೇರಿ ಹಿಂಸಾಚಾರ:ಬಿಜೆಪಿ ನಾಯಕ ಸೇರಿದಂತೆ ಇನ್ನೂ ನಾಲ್ವರ ಬಂಧನ
ಲಕ್ನೊ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರನ್ನು ಹರಿಸಿ ಹತ್ಯೆಗೈದ ಆರೋಪದ ಮೇಲೆ ಬಿಜೆಪಿ ನಾಯಕ ಸೇರಿದಂತೆ ಇನ್ನೂ ನಾಲ್ಕು ಜನರನ್ನು ಸೋಮವಾರ ಬಂಧಿಸಲಾಗಿದೆ.
"ಆರೋಪಿಗಳಾದ ಸುಮಿತ್ ಜೈಸ್ವಾಲ್, ಶಿಶುಪಾಲ್, ನಂದನ್ ಸಿಂಗ್ ಬಿಶ್ತ್ ಹಾಗೂ ಸತ್ಯ ಪ್ರಕಾಶ್ ತ್ರಿಪಾಠಿಯನ್ನು ಲಖಿಂಪುರ ಖೇರಿ ಪೊಲೀಸರು ಹಾಗೂ ಎಸ್ ಡಬ್ಯ್ಲು ಎಟಿ ಕ್ರೈಂ ಬ್ರಾಂಚ್ ತಂಡ ಬಂಧಿಸಿದೆ. ಪರವಾನಗಿ ಪಡೆದ ರಿವಾಲ್ವರ್ ಹಾಗೂ ಮೂರು ಗುಂಡುಗಳನ್ನು ಸತ್ಯ ಪ್ರಕಾಶ್ ತ್ರಿಪಾಠಿಯಿಂದ ವಶಪಡಿಸಿಕೊಳ್ಳಲಾಗಿದೆ " ಎಂದು ಪೊಲೀಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ರೈತರ ಮೇಲೆ ಎಸ್ಯುವಿಯನ್ನು ಹರಿಸುತ್ತಿರುವ ವೀಡಿಯೋದಲ್ಲಿ ಸ್ಥಳೀಯ ಬಿಜೆಪಿ ನಾಯಕ ಸುಮಿತ್ ಜೈಸ್ವಾಲ್ ಕಾಣಿಸಿಕೊಂಡಿದ್ದ.
Next Story