ಮುಂಬೈ ಡ್ರಗ್ಸ್ ಪ್ರಕರಣ:ಎನ್ ಸಿಬಿಯ ದಿಲ್ಲಿ ಘಟಕಕ್ಕೆ ಹೇಳಿಕೆ ನೀಡಿದ ಆರ್ಯನ್ ಖಾನ್
ಹೊಸದಿಲ್ಲಿ: ಮುಂಬೈ ಡ್ರಗ್ಸ್ ಆನ್ ಕ್ರೂಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಇಂದು ಮಾದಕವಸ್ತು ವಿರೋಧಿ ಏಜೆನ್ಸಿ ಎನ್ ಸಿಬಿಯ ದಿಲ್ಲಿ ಘಟಕಕ್ಕೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಥವಾ ಎನ್ಸಿಬಿಯ ದಿಲ್ಲಿ ಘಟಕವು ತನ್ನ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರಿಂದ ತನಿಖೆಯನ್ನು ವಹಿಸಿಕೊಂಡಿದೆ. ಆರ್ಯನ್ ಖಾನ್ ರನ್ನು ಪ್ರಕರಣದಿಂದ ಕೈಬಿಡಲು ವಾಂಖೆಡೆ ಲಂಚದ ಬೇಡಿಕೆ ಇಟ್ಟಿದ್ದಾರೆಂಬ ‘ಸ್ವತಂತ್ರ ಸಾಕ್ಷಿ’ ಮಾಡಿರುವ ಆರೋಪವು ಭಾರೀ ವಿವಾದಕ್ಕೆ ಕಾರಣವಾಗಿದೆ.
ನವಿ ಮುಂಬೈನಲ್ಲಿರುವ ರ್ಯಾಪಿಡ್ ಆಕ್ಷನ್ ಫೋರ್ಸ್ ಶಿಬಿರದಲ್ಲಿ ಆರ್ಯನ್ ಖಾನ್ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯ ಎನ್ ಸಿಬಿ ಯ ವಿಶೇಷ ತನಿಖಾ ತಂಡವು ವಾಂಖೆಡೆಯಿಂದ ಆರು ಪ್ರಕರಣಗಳನ್ನು ತೆಗೆದುಕೊಂಡಿತು. ಅವುಗಳಲ್ಲಿ ಕೆಲವು ಸೂಕ್ಷ್ಮವಾಗಿದ್ದು, ಮನರಂಜನಾ ಕ್ಷೇತ್ರದೊಂದಿಗೆ ನಂಟು ಹೊಂದಿದೆ ಎಂದು ಹೇಳಲಾಗುತ್ತಿದೆ.
Next Story