ಮಹಾರಾಷ್ಟ್ರದಲ್ಲಿ ಮಾರ್ಚ್ ವೇಳೆಗೆ ಬಿಜೆಪಿ ಸರಕಾರ: ಕೇಂದ್ರ ಸಚಿವ ರಾಣೆ
"ಸರಕಾರವನ್ನು ಬೀಳಿಸಲು ಕೆಲವು ವಿಷಯಗಳನ್ನು ರಹಸ್ಯವಾಗಿಡಬೇಕು"
ಕೇಂದ್ರ ಸಚಿವ ನಾರಾಯಣ ರಾಣೆ
ಹೊಸದಿಲ್ಲಿ: ಮುಂದಿನ ಚುನಾವಣೆಗೆ ಎರಡು ವರ್ಷಗಳ ಮೊದಲು 2022ರ ಮಾರ್ಚ್ ನಲ್ಲಿ ಬಿಜೆಪಿ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲಿದೆ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಶುಕ್ರವಾರ ಹೊಸ ಮಾತಿನ ಬಾಂಬ್ ಸಿಡಿಸಿದ್ದಾರೆ.
"ಮಾರ್ಚ್ನಲ್ಲಿ ಬಿಜೆಪಿ ಸರಕಾರ ರಚಿಸಲಿದೆ ಹಾಗೂ ನೀವು ಬದಲಾವಣೆಯನ್ನು ನೋಡುತ್ತೀರಿ" ಎಂದು ಜೈಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ರಾಣೆ ಪ್ರತಿಕ್ರಿಯಿಸಿದರು.
ಅಚ್ಚರಿ ಮೂಡಿಸುವ ಹೇಳಿಕೆಯ ಬಗ್ಗೆ ರಾಣೆಯವರಲ್ಲಿ ಕೇಳಿದಾಗ "ಸರಕಾರ ರಚಿಸಲು, ಸರಕಾರವನ್ನು ಬೀಳಿಸಲು ಕೆಲವು ವಿಷಯಗಳನ್ನು ರಹಸ್ಯವಾಗಿಡಬೇಕು" ಎಂದು ಹೇಳಿದರು.
ಭಾರತ ಸ್ವಾತಂತ್ರ್ಯ ಗಳಿಸಿದ ವರ್ಷ ಗೊತ್ತಿಲ್ಲದ ಉದ್ಧವ್ ಠಾಕ್ರೆ ಅವರನ್ನು ಕಪಾಳಮೋಕ್ಷ ಮಾಡಲು ಬಯಸುತ್ತೇನೆ ಎಂಬ ಹೇಳಿಕೆ ನೀಡಿದ್ದಕ್ಕಾಗಿ ಈ ವರ್ಷದ ಆಗಸ್ಟ್ ನಲ್ಲಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಬಿಜೆಪಿ ನಾಯಕ ರಾಣೆ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿದ್ದಾರೆ.
#WATCH | "Change will be seen in Maharashtra very soon. The change will be seen by March. To form a government, to break a govt, some things have to be kept secret," Union Minister Narayan Rane in Jaipur (25.11) pic.twitter.com/GAlDtDr1xO
— ANI (@ANI) November 26, 2021