ಛತ್ತೀಸ್ಗಡ: ಮಾವೋವಾದಿಗಳಿಂದ ಪೊಲೀಸ್ ಸಿಬ್ಬಂದಿಯ ಹತ್ಯೆ
ರಾಯಪುರ,ಎ.11: ಛತ್ತೀಸ್ಗಡದ ಬಿಜಾಪುರ ಜಿಲ್ಲೆಯ ಮಿರ್ತೂರ ಗ್ರಾಮದಲ್ಲಿ ರವಿವಾರ ನಡೆದಿದ್ದ ವಾರದ ಸಂತೆಯಲ್ಲಿ ಸಹಾಯಕ ಪೊಲೀಸ್ ಕಾನ್ಸ್ಟೇಬಲ್ ಓರ್ವರನ್ನು ಮಾವೋವಾದಿಗಳು ಹತ್ಯೆ ಮಾಡಿದ್ದಾರೆ.
ಮೃತರನ್ನು ಮಿರ್ತೂರು ಗ್ರಾಮದ ನಿವಾಸಿ ಗೋಪಾಲ ಕಡ್ತಿ ಎಂದು ಹೆಸರಿಸಲಾಗಿದೆ. ಕಡ್ತಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಯ ಸಮೀಪವೇ ವಾರದ ಸಂತೆ ನಡೆಯುತ್ತದೆ. ಠಾಣೆಯಲ್ಲಿ ಸೆಂಟ್ರಿ ಕರ್ತವ್ಯ ಮುಗಿಸಿದ ಬಳಿಕ ಅಪರಾಹ್ನ ಮೂರು ಗಂಟೆಯ ಸುಮಾರಿಗೆ ಕಡ್ತಿ ಸಿವಿಲ್ ಉಡುಪಿನಲ್ಲಿ ಸಂತೆಗೆ ತೆರಳಿದ್ದರು. ಅಲ್ಲಿ ಮಾವೋವಾದಿಗಳ ತಂಡವೊಂದು ಹರಿತವಾದ ಆಯುಧಗಳಿಂದ ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ಬಸ್ತಾರ್ ಐಜಿ ಸುಂದರರಾಜ್ ತಿಳಿಸಿದರು.
Next Story