ವಿಶೇಷ ಚೇತನ ಮಗುವಿಗೆ ವಿಮಾನ ಏರಲು ಅವಕಾಶ ನಿರಾಕರಣೆ: ಸ್ವತಃ ತನಿಖೆ ನಡೆಸಿ ಕ್ರಮಕೈಗೊಳ್ಳುವೆ ಎಂದ ಸಚಿವ ಸಿಂಧಿಯಾ
Photo: facebook.com/Manisha Gupta
ಹೊಸದಿಲ್ಲಿ: ವಿಶೇಷ ಚೇತನ ಮಗುವಿಗೆ ಇತ್ತೀಚೆಗೆ ರಾಂಚಿ ವಿಮಾನ ನಿಲ್ದಾಣದಲ್ಲಿ ಕುಟುಂಬ ಸಮೇತ ವಿಮಾನ ಹತ್ತಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಸೋಮವಾರ ಇಂಡಿಗೋ ಏರ್ಲೈನ್ಸ್ಗೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಎಚ್ಚರಿಕೆ ನೀಡಿದ್ದಾರೆ.
"ಇಂತಹ ನಡವಳಿಕೆಯ ಬಗ್ಗೆ ಶೂನ್ಯ ಸಹಿಷ್ಣುತೆ ಇದೆ . ಯಾವುದೇ ಮನುಷ್ಯನು ಹೀಗೆ ಮಾಡಬಾರದು! ಈ ವಿಷಯವನ್ನು ನಾನೇ ತನಿಖೆ ಮಾಡುವೆ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಸಚಿವರು ಟ್ವಿಟರ್ನಲ್ಲಿ ಬರೆದಿದ್ದಾರೆ.
ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಕೂಡ ಇಂಡಿಗೋಗೆ ವರದಿಯನ್ನು ಕೇಳಿದೆ.
“ವಿಶೇಷ ಚೇತನ ಮಗು ಭಯಭೀತರಾಗಿದ್ದರಿಂದ ಮೇ 7 ರಂದು ತನ್ನ ಕುಟುಂಬದೊಂದಿಗೆ ವಿಮಾನವನ್ನು ಹತ್ತಲು ಸಾಧ್ಯವಾಗಲಿಲ್ಲ. ಮೈದಾನದ ಸಿಬ್ಬಂದಿ ಕೊನೆಯ ಕ್ಷಣದವರೆಗೂ ಮಗು ಶಾಂತವಾಗಲು ಕಾಯುತ್ತಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ" ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
There is zero tolerance towards such behaviour. No human being should have to go through this! Investigating the matter by myself, post which appropriate action will be taken. https://t.co/GJkeQcQ9iW
— Jyotiraditya M. Scindia (@JM_Scindia) May 9, 2022