ಸಿಎಎ ಪ್ರತಿಭಟನೆಯ ಕೇಂದ್ರವಾಗಿದ್ದ ಶಾಹೀನ್ಭಾಗ್ ನಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ
Photo: Abhinaya Harigovind/Twitter
ಹೊಸದಿಲ್ಲಿ: ವಿವಾದಿತ ಪೌರತ್ವ ಕಾನೂನಿನ ವಿರುದ್ಧದ ಬೃಹತ್ ಪ್ರತಿಭಟನೆ ನಡೆಸಿದ್ದ ಕೇಂದ್ರವಾದ ಶಾಹೀನ್ ಬಾಗ್ನಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಂಸಿ) ಇಂದು ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಲು ಸಿದ್ಧವಾಗಿದೆ ಎಂದು ndtv.com ವರದಿ ಮಾಡಿದೆ. ಸ್ಥಳಕ್ಕೆ ಬುಲ್ಡೋಝರ್ ಗಳು ಈಗಾಗಲೇ ಆಗಮಿಸಿವೆ.
ಈ ಮೊದಲು ಶುಕ್ರವಾರ ನಡೆಯಬೇಕಿದ್ದ ಕಾರ್ಯಾಚಾರಣೆಯು ಸೂಕ್ತ ಭದ್ರತಾ ಪಡೆಯ ಅಲಭ್ಯತೆಯಿಂದಾಗಿ ರದ್ದಾಗಿತ್ತು. ಇಂದು ಬೆಳಗ್ಗೆ ದಿಲ್ಲಿ ಪೊಲೀಸರು ಧ್ವಂಸ ಕಾರ್ಯಾಚರಣೆಗೆ ಸ್ಥಳದಲ್ಲಿ ಸೂಕ್ತ ಬಲವನ್ನು ಒದಗಿಸಿದ್ದು ಒದಗಿಸಿದ್ದು, ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.
Next Story