"ನನ್ನನ್ನು ಮುಕ್ತಗೊಳಿಸಿ’’: ರಾಜೀನಾಮೆಗೆ ಮುಂದಾದ ರಾಜಸ್ಥಾನ ಸಚಿವ, ಕಾಂಗ್ರೆಸ್ ಗೆ ಸಂಕಷ್ಟದ ಸೂಚನೆ
Photo: twitter
ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ ಸಚಿವರೊಬ್ಬರು ರಾಜ್ಯದ ಅಧಿಕಾರಶಾಹಿಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ ಹಾಗೂ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ತನ್ನನ್ನು ಸಚಿವ ಸ್ಥಾನದಿಂದ ಬಿಡುಗಡೆ ಮಾಡುವಂತೆ ಹಾಗೂ ಗೆಹ್ಲೋಟ್ ಅವರ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಾಂಕಾ ಅವರಿಗೆ ಎಲ್ಲಾ ಇಲಾಖೆಗಳನ್ನು ನೀಡುವಂತೆ ರಾಜಸ್ಥಾನ ಸಚಿವ ಅಶೋಕ್ ಚಂದನ ಟ್ವೀಟ್ ನಲ್ಲಿ ಸಿಎಂ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ಚಂದನ ಅವರು ರಾಜಸ್ಥಾನದಲ್ಲಿ ಕ್ರೀಡೆ ಹಾಗೂ ಯುವ ವ್ಯವಹಾರಗಳು, ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ ಹಾಗೂ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವರಾಗಿದ್ದಾರೆ.
"ಮಾನ್ಯ ಮುಖ್ಯಮಂತ್ರಿಗಳೇ, ನನ್ನನ್ನು ಈ ಕ್ರೂರ ಸಚಿವ ಸ್ಥಾನದಿಂದ ಮುಕ್ತಗೊಳಿಸಿ, ನನ್ನ ಎಲ್ಲಾ ಇಲಾಖೆಗಳ ಉಸ್ತುವಾರಿಯನ್ನು ಕುಲದೀಪ್ ರಂಕಾ ಜಿ ಅವರಿಗೆ ನೀಡಬೇಕು. ಏಕೆಂದರೆ ಅವರು ಎಲ್ಲಾ ಇಲಾಖೆಗಳ ಸಚಿವರಾಗಿದ್ದಾರೆ. ಧನ್ಯವಾದಗಳು. " ಎಂದು ಚಂದನ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
माननीय मुख्यमंत्री जी मेरा आपसे व्यक्तिगत अनुरोध है की मुझे इस ज़लालत भरे मंत्री पद से मुक्त कर मेरे सभी विभागों का चार्ज श्री कुलदीप रांका जी को दे दिया जाए, क्योंकि वैसे भी वो ही सभी विभागों के मंत्री है।
— Ashok Chandna (@AshokChandnaINC) May 26, 2022
धन्यवाद