ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಶೂಟರ್ ಸಂತೋಷ್ ಜಾಧವ್, ಸಹವರ್ತಿ ಬಂಧನ
ಪುಣೆ, ಜೂ. 13: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಶೂಟರ್ ಸಂತೋಷ್ ಜಾಧವ್ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಜಾಧವ್ನ ಸಹವರ್ತಿ ಹಾಗೂ ಈ ಪ್ರಕರಣದಲ್ಲಿ ಶಂಕಿತ ನವನಾಥ್ ಸೂರ್ಯವಂಶಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯ ಜಾಧವ್ (24) ಹಾಗೂ ಸೂರ್ಯವಂಶಿ (27) ಅನ್ನು ಪುಣೆಯ ಗ್ರಾಮೀಣ ಪೊಲೀಸ್ನ ತಂಡ ಗುಜರಾತ್ನ ಬುಜ್ನ ಮಾಂಡವಿ ತಾಲೂಕಿನಿಂದ ರವಿವಾರ ಬಂಧಿಸಿದೆ ಎಂದು ಹೆಚ್ಚುವರಿ ಪ್ರಧಾನ ನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಕುಲ್ವಂತ್ ಸಿಂಗ್ ಸರಂಗಲ್ ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಮಂಚರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜಾಧವ್ನನ್ನು 2001ರಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಕಳೆದ ಒಂದು ವರ್ಷಗಳಿಂದ ತಲೆ ಮರೆಸಿಕೊಂಡಿರುವ ಜಾಧವ್ ಬಂಧನದಿಂದ ತಪ್ಪಿಸಿಕೊಳ್ಳಲು ಕೇಶ ಮುಂಡನ ಮಾಡಿಸಿದ್ದ ಹಾಗೂ ಸ್ವರೂಪ ಬದಲಾಯಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.