ಅಪಹರಣದ ಆರೋಪ ಮಾಡಿದ್ದ ಶಾಸಕನೊಂದಿಗಿದ್ದ ಫೋಟೊ ಬಿಡುಗಡೆ ಮಾಡಿದ ಶಿವಸೇನೆಯ ಬಂಡಾಯ ಬಣ
ನಿತಿನ್ ದೇಶ್ಮುಖ್,Photo:twitter
ಮುಂಬೈ: ತನ್ನನ್ನು 'ಅಪಹರಿಸಿ' ಗುಜರಾತ್ನ ಸೂರತ್ಗೆ ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದ ಪಕ್ಷದ ಶಾಸಕ ನಿತಿನ್ ದೇಶ್ಮುಖ್ ಅವರು ಇತರ ಬಂಡಾಯ ಶಾಸಕರೊಂದಿಗೆ ಖಾಸಗಿ ವಿಮಾನದ ಮುಂದೆ ನಿಂತಿರುವ ಫೋಟೊವನ್ನು ಶಿವಸೇನೆ ಬಂಡಾಯ ಬಣ ಬಿಡುಗಡೆ ಮಾಡಿದೆ.
ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಶಾಸಕರ ಬಂಡಾಯದ ನಡುವೆ ಎರಡು ದಿನಗಳ ಕಾಲ ನಾಪತ್ತೆಯಾದ ಬಳಿಕ ದೇಶಮುಖ್ ಅವರು ಬುಧವಾರ ಸೂರತ್ನಲ್ಲಿ ಮತ್ತೆ ಕಾಣಿಸಿಕೊಂಡಿದ್ದರು ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನಿಷ್ಠೆ ತೋರುವುದಾಗಿ ಪ್ರತಿಜ್ಞೆ ಮಾಡಿದ್ದರು.
ನೂರಾರು ಪೊಲೀಸರು ನನ್ನನ್ನು ಬಲವಂತವಾಗಿ ಸೂರತ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸೂರತ್ ನಲ್ಲಿ ನನಗೆ ಹೃದಯಾಘಾತವಾಗಿದೆ ಎಂದು ಹೇಳಿದ ನಂತರ ನನಗೆ ಏನೋ ಒಂದು ಚುಚ್ಚುಮದ್ದು ನೀಡಲಾಯಿತು ಎಂದು ಶಿವಸೇನಾ ಶಾಸಕ ದೇಶ್ ಮುಖ್ ಆರೋಪಿಸಿದ್ದಾರೆ.
ಆದಾಗ್ಯೂ, ದೇಶಮುಖ್ ಅವರ ಹೇಳಿಕೆಗಳನ್ನು ಫೋಟೊ ಬಿಡುಗಡೆ ಮಾಡುವ ಮೂಲಕ ಶಿಂಧೆ ಬಣ ತಳ್ಳಿ ಹಾಕಿದೆ.
Next Story